Select Your Language

Notifications

webdunia
webdunia
webdunia
webdunia

ಅಪ್ಪು ಸರ್ ಹೋದ ಮೇಲೆ ಕಿಚ್ಚ ಸರ್ ಕೈ ಹಿಡಿದರು: ಸುದೀಪ್ ನೆರವಿಗೆ ಥ್ಯಾಂಕ್ಸ್ ಹೇಳಿದ ಅಭಿಮಾನಿ

ಅಪ್ಪು ಸರ್ ಹೋದ ಮೇಲೆ ಕಿಚ್ಚ ಸರ್ ಕೈ ಹಿಡಿದರು: ಸುದೀಪ್ ನೆರವಿಗೆ ಥ್ಯಾಂಕ್ಸ್ ಹೇಳಿದ ಅಭಿಮಾನಿ
ಬೆಂಗಳೂರು , ಶುಕ್ರವಾರ, 10 ಡಿಸೆಂಬರ್ 2021 (08:40 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಯೊಬ್ಬರ ಕಷ್ಟಕ್ಕೆ ಕಿಚ್ಚ ಸುದೀಪ್ ಸ್ಪಂದಿಸಿದ ಸುದ್ದಿಯನ್ನು ಇತ್ತೀಚೆಗೆ ಓದಿರುತ್ತೀರಿ. ಇದೀಗ ಅದೇ ಅಭಿಮಾನಿ ಸುದೀಪ್ ಗೆ ಧನ್ಯವಾದ ಸಲ್ಲಿಸಿದ್ದಾರೆ.

ಪುನೀತ್ ಅಪ್ಪಟ ಅಭಿಮಾನಿಯಾಗಿದ್ದ ಬೆನಕ ಎಂಬವರ ತಾಯಿಗೆ ಆಕ್ಸಿಡೆಂಟ್ ಆಗಿ ತಲೆಗೆ ಪೆಟ್ಟಾಗಿದ್ದರಿಂದ ಚಿಕಿತ್ಸೆಗೆ ಹಣ ಬೇಕಾಗಿತ್ತು. ಸಾಮಾನ್ಯವಾಗಿ ಕಷ್ಟ ಬಂದರೆ ಅಪ್ಪು ಬಳಿ ನೆರವು ಕೇಳುತ್ತಿದ್ದ ಬೆನಕಗೆ ಈ ಬಾರಿ ತಮ್ಮ ಮೆಚ್ಚಿನ ನಟನೇ ಇಲ್ಲದಿರುವುದರಿಂದ ದಿಕ್ಕು ತೋಚದೇ ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್ ನ ನೆರವು ಕೋರಿದ್ದರು. ಅಪ್ಪು ಅಭಿಮಾನಿಯ ಕಷ್ಟಕ್ಕೆ ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಸ್ಪಂದಿಸಿ ನೆರವು ನೀಡಿದ್ದರು.
ಇದಕ್ಕೆ ಧನ್ಯವಾದ ಸಲ್ಲಿಸಿರುವ ಬೆನಕ, ನನ್ನ ಹಾಗೂ ತಾಯಿಗೆ ಸಕಾಲದಲ್ಲಿ ನೆರವಾದ ಕಿಚ್ಚ ಸುದೀಪ್ ಮತ್ತು ಅವರ ಚ್ಯಾರಿಟೇಬಲ್ ಟ್ರಸ್ಟ್ ಗೆ ಎಂದೆಂದಿಗೂ ಋಣಿಯಾಗಿರುವೆ. ಕಷ್ಟ ಬಂದಾಗ ಸಾಂತ್ವನ ಹೇಳುತ್ತಿದ್ದ ಅಪ್ಪು ಸರ್ ಹೋದ ಮೇಲೆ ನನಗೆ ಸಿಕ್ಕಿದ್ದು ಅವರ ಸ್ನೇಹಿತ ಕಿಚ್ಚ ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್. ನಾನು ಯಾರ ಅಭಿಮಾನಿ ಅಂತ ನೋಡದೇ ನನಗೆ ಸಹಾಯ ಮಾಡಿದ್ದಾರೆ. ಕೆಲವರು ಇದಕ್ಕೆಲ್ಲಾ ಮತ್ತೇನೋ ಕಥೆ ಕಟ್ಟಬೇಡಿ. ಇದೆಲ್ಲಾ ಮಾನವೀಯತೆಯ ದೃಷ್ಟಿಯಿಂದ ಅಷ್ಟೇ ಹೊರತು ಇದರ ಹಿಂದೆ ಬೇರೇನೂ ಉದ್ದೇಶವಿಲ್ಲ ಎಂದು ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪು ಸಮಾಧಿಗೆ ಹೊರಟ ಮಹಿಳೆಯ ಆರೋಗ್ಯ ವಿಚಾರಿಸಿದ ರಾಘಣ್ಣ