Publish Date: Sat, 13 Jan 2024 (10:12 IST)
Updated Date: Sat, 13 Jan 2024 (10:18 IST)
ಬೆಂಗಳೂರು: ಕಾಟೇರ ಸಕ್ಸಸ್ ಬಳಿಕ ಬೆಂಗಳೂರಿನ ಪಬ್ ಒಂದರಲ್ಲಿ ರಾತ್ರಿಯಿಡೀ ಪಾರ್ಟಿ ಮಾಡಿದ ಆರೋಪಕ್ಕೊಳಗಾದ ಸೆಲೆಬ್ರಿಟಿಗಳು ನಿನ್ನೆ ಪೊಲೀಸ್ ವಿಚಾರಣೆಗೆ ಹಾಜರಾದರು.
ಆದರೆ ಪೊಲೀಸರ ಮುಂದೆ ದರ್ಶನ್ ಮತ್ತು ಇತರರು ನೀಡಿದ ಹೇಳಿಕೆಗೂ ಪೊಲೀಸರ ಆರೋಪಗಳಿಗೂ ಹೊಂದಿಕೆಯೇ ಆಗುತ್ತಿಲ್ಲ. ಹೀಗಾಗಿ ದರ್ಶನ್ ರನ್ನು ಬೇಕೆಂದೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರ ಪರ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಪಬ್ ನಲ್ಲಿ ಮದ್ಯ ಸರಬರಾಜು ನಡೆಯುತ್ತಿತ್ತು. ರಾತ್ರಿಯಿಡೀ ಪಾರ್ಟಿ ಮಾಡಲಾಗುತ್ತಿತ್ತು. ಪೊಲೀಸರು ಬಂದು ಎಚ್ಚರಿಕೆ ನೀಡಿದ್ದರು ಎಂದೆಲ್ಲಾ ವರದಿಯಲ್ಲಿ ಉಲ್ಲೇಖಿಸಿದ್ದರು.
ಆದರೆ ದರ್ಶನ್ ಮತ್ತು ಇತರೆ ನಟರು ನಿನ್ನೆ ವಿಚಾರಣೆ ವೇಳೆ ನಾವು ಮದ್ಯ ಸೇವಿಸಿರಲಿಲ್ಲ. ಊಟ ಮಾಡಲು ಹೋಗಿದ್ದೆವಷ್ಟೆ. ಅಲ್ಲಿಗೆ ಯಾವ ಪೊಲೀಸರೂ ಬಂದಿರಲಿಲ್ಲ ಎಂದಿದ್ದಾರೆ. ಹೀಗಾಗಿ ನಟರ ಹೇಳಿಕೆ ಮತ್ತು ಪೊಲೀಸರ ಆರೋಪಕ್ಕೆ ಹೊಂದಿಕೆಯೇ ಆಗುತ್ತಿಲ್ಲ.
ಹೀಗಾಗಿ ದರ್ಶನ್ ಪರ ವಕೀಲರು ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಬೇಕೆಂದೇ ದರ್ಶನ್ ರನ್ನು ಸಣ್ಣ ಪುಟ್ಟ ವಿಚಾರಕ್ಕೆಲ್ಲಾ ಎಳೆದು ತರಲಾಗುತ್ತಿದೆ. ಯಾರೋ ಅವರಿಗೆ ಆಗದವರು ಬೇಕೆಂದೇ ಈ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.