Publish Date: Wed, 28 Apr 2021 (11:57 IST)
Updated Date: Wed, 28 Apr 2021 (11:59 IST)
ಚೆನ್ನೈ : ನಟ ಅರುಣ್ ವಿಜಯ್ ಅವರ ಮಾವ ಮತ್ತು ನಿರ್ಮಾಪಕ ಎನ್.ಎಸ್.ಮೋಹನ್ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ನಿರ್ಮಾಪಕ ಮೋಹನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಕಾಲಿವುಡ್ ಚಿತ್ರರಂಗ, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಇವರು ಅರುಣ್ ವಿಜಯ್ ಅಭಿನಯದ ವಾ, ಮಾಂಜ ವೇಲು, ತಡೈಯರಾ ಥಕ್ಕಾ ಮತ್ತು ಮಲೈ ಮಲೈ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇವುಗಳು ಗಲ್ಲಾ ಪೆಟ್ಟಿಗೆಯಲ್ಲಿ ಸೂಪರ್ ಹಿಟ್ ಆಗಿವೆ.