Select Your Language

Notifications

webdunia
webdunia
webdunia
webdunia

ನಟ ದುನಿಯಾ ವಿಜಿಗಾಗಿ ಹುಡುಕಾಡುತ್ತಿರುವ ಪೊಲೀಸರು

ನಟ ದುನಿಯಾ ವಿಜಿಗಾಗಿ ಹುಡುಕಾಡುತ್ತಿರುವ ಪೊಲೀಸರು
ಬೆಂಗಳೂರು , ಶುಕ್ರವಾರ, 1 ಜೂನ್ 2018 (10:19 IST)
ಬೆಂಗಳೂರು: ಮಾಸ್ತಿ ಗುಡಿ ದುರಂತದ ವೇಳೆ ಸಹನಟರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಮೇಲೆ ಎಫ್ ಐಆರ್ ದಾಖಲಾಗಿದ್ದು, ನಟನ ಬಂಧನಕ್ಕಾಗಿ ಇದೀಗ ಪೊಲೀಸರು ಹುಡುಕಾಡುತ್ತಿದ್ದಾರೆ.

ಮಾಸ್ತಿಗುಡಿ ನಿರ್ಮಾಪಕ ಸುಂದರ್ ಪಿ ಗೌಡ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಲ್ಲದೆ, ಪೊಲೀಸರ ಜತೆ ಅನುಚಿತ ವರ್ತನೆ ಮಾಡಿದ ಆರೋಪದ ಮೇಲೆ ವಿಜಯ್ ಮೇಲೆ ಚೆನ್ನಮ್ಮನಕೆರೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು.

ಹೀಗಾಗಿ ದುನಿಯಾ ವಿಜಯ್ ಬಂಧಿಸಲು ವಾರಂಟ್ ಸಮೇತ ಮನೆಗೆ ತೆರಳಿದ್ದ ಪೊಲೀಸರು ಬರಿಗೈಯಲ್ಲಿ ವಾಪಸಾಗಿದ್ದಾರೆ. ಕುಟುಂಬಸ್ಥರನ್ನು ಕೇಳಿದಾಗ ದುನಿಯಾ ವಿಜಯ್ ಮನೆಯಲ್ಲಿಲ್ಲ, ಹೊರಗಡೆ ಹೋಗಿದ್ದಾರೆ ಎಂಬ ಉತ್ತರ ಬಂದಿದೆ ಎನ್ನಲಾಗಿದೆ. ಇದೀಗ ನಟನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪುತ್ರನನ್ನು ಹತ್ಯೆಗೈದ ನಿರೂಪಕ ಚಂದನ್ ಪತ್ನಿಯೂ ಸಾವು