Select Your Language

Notifications

webdunia
webdunia
webdunia
webdunia

ಜೈಲಿನಲ್ಲಿ ರಾಜಾತಿಥ್ಯಕ್ಕೆ ನಟ ದರ್ಶನ್ ಗೆ ಇನ್ನು ಪೊಲೀಸರಿಂದ ಆತಿಥ್ಯ

Darshan

Krishnaveni K

ಬೆಂಗಳೂರು , ಮಂಗಳವಾರ, 27 ಆಗಸ್ಟ್ 2024 (12:11 IST)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದುಕೊಂಡ ಕಳ್ಳಾಟವಾಡಿದ್ದಕ್ಕೆ ಈಗ ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇನ್ನೀಗ ದರ್ಶನ್ ಗೆ ಮತ್ತೆ ಪೊಲೀಸರ ಆತಿಥ್ಯ ಸಿಗುವ ಸಾಧ್ಯತೆಯಿದೆ.

ನಟ ದರ್ಶನ್ ಮೇಲೆ ಈಗ ವಿಐಪಿ ಟ್ರೀಟ್ ಮೆಂಟ್ ಪಡೆದ ಅರೋಪದಲ್ಲಿ ಮೂರು ಪ್ರತ್ಯೇಕ ದೂರುಗಳು ದಾಖಲಾಗಿವೆ. ಎಲ್ಲಾ ದೂರಿನಲ್ಲೂ ದರ್ಶನ್ ಎ1 ಆರೋಪಿಯಾಗಿದ್ದಾರೆ. ಜೈಲಿನಲ್ಲಿ ವಿಶೇಷ ಊಟೋಪಚಾರ ಪಡೆದಿರುವುದು, ವಿಡಿಯೋ ಕಾಲ್ ಮಾಡಿರುವುದು ಇತ್ಯಾದಿ ವಿಚಾರಗಳು ದರ್ಶನ್ ಗೆ ಕಂಟಕವಾಗಿದೆ.

ಇದೀಗ ಈ ಪ್ರಕರಣದ ವಿಚಾರಣೆಗೆ ಪೊಲೀಸರು ಮತ್ತೆ ದರ್ಶನ್ ರನ್ನು ಪೊಲೀಸ್ ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ನಾಳೆ ದರ್ಶನ್ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಲಿದ್ದು, ಈ ವೇಳೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರಾಗಬೇಕಾಗುತ್ತದೆ.

ಈ ವೇಳೆ ಪೊಲೀಸರು ಅವರ ವಿರುದ್ಧ ಹೊಸದಾಗಿ ದಾಖಲಾಗಿರುವ ಪ್ರಕರಣದ ವಿಚಾರಣೆ ನಡೆಸಲು ವಶಕ್ಕೆ ಕೇಳುವ ಸಾಧ್ಯತೆಯಿದೆ. ಒಂದು ವೇಳೆ ನ್ಯಾಯಾಲಯ ಅನುಮತಿಸಿದರೆ ದರ್ಶನ್ ಮತ್ತೆ ಪೊಲೀಸ್ ವಶಕ್ಕೆ ಹೋಗಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಪರಿಸ್ಥಿತಿಗೆ ರಚಿತಾ ರಾಮ್ ಮೇಲೆ ಅಭಿಮಾನಿಗಳ ಸಿಟ್ಟು ಯಾಕೆ