Select Your Language

Notifications

webdunia
webdunia
webdunia
webdunia

ಅಣ್ಣ ಚಿರಂಜೀವಿ ಕಾಲಿಗೆ ಅಡ್ಡಬಿದ್ದು ಆಶೀರ್ವಾದ ಪಡೆದ ಪವನ್‌ ಕಲ್ಯಾಣ್‌

ಅಣ್ಣ ಚಿರಂಜೀವಿ ಕಾಲಿಗೆ ಅಡ್ಡಬಿದ್ದು ಆಶೀರ್ವಾದ ಪಡೆದ ಪವನ್‌ ಕಲ್ಯಾಣ್‌

sampriya

ಹೈದರಾಬಾದ್ , ಗುರುವಾರ, 6 ಜೂನ್ 2024 (18:47 IST)
Photo By X
ಹೈದರಾಬಾದ್:‌ ಜನಸೇವಾ ಅಧ್ಯಕ್ಷ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಪಿಠಾಪುರದ ಶಾಸಕ ಪವನ್‌ ಕಲ್ಯಾಣ್‌ ಅವರನ್ನು ಸಹೋದರ  ಮೆಗಾಸ್ಟಾರ್‌ ಚಿರಂಜೀವಿ ಹಾಗೂ ಅವರ ಕುಟುಂಬ  ಗ್ರ್ಯಾಂಡ್‌ ಆಗಿ ಸ್ವಾಗತಿಸಿ, ಸಂಭ್ರಮಿಸಿದರು.

ಗುರುವಾರ ಪವನ್‌ ಕಲ್ಯಾಣ್‌ ಅವರ ವಿಜಯವನ್ನು ಸಂಭ್ರಮಿಸಿಲು ಇಡೀ ಮೆಗಾ ಕುಟುಂಬ ಹಾಜರಾಗಿತ್ತು.  ಗುರುವಾರ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಅವರ ಹಿರಿಯ ಸಹೋದರ, ಮೆಗಾಸ್ಟಾರ್ ಕೊನಿಡೇಲ ಚಿರಂಜೀವಿ ಅವರ ನಿವಾಸದಲ್ಲಿ ಪವನ್‌ ಕಲ್ಯಾಣ್‌ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.

ಇನ್ನೂ ಪವನ್‌ ಕಲ್ಯಾಣ್‌ ಅವರು ಚಿರಂಜೀವಿ ಅವರ ನಿವಾಸವನ್ನು ಪ್ರವೇಶಿಸುತ್ತಿದ್ದಂತೆ ಹಾಗೇ ಮೆಗಾ ಕುಟುಂಬ ಮತ್ತು ಮನೆಯ ಸಿಬ್ಬಂದಿ ಗುಲಾಬಿ ದಳಗಳ ಸುರಿಮಳೆಗೈದು ಸ್ವಾಗತಿಸಿದರು.

ಇನ್ನೂ ಅಣ್ಣ ಚಿರಂಜೀವಿ ಅವರನ್ನು ನೋಡುತ್ತಿದ್ದ ಹಾಗೇ ಪವನ್‌ ಅವರು ಕಾಲಿಗೆ ಅಡ್ಡ ಬಿದ್ದು ನಮಸ್ಕರಿಸಿದರು.  ಈ ವೇಳೆ ತಮ್ಮನ ಕೆನ್ನೆಗೆ ಕಿಸ್‌ ಕೊಟ್ಟ ಚಿರಂಜೀವಿ ಅವರು ಪ್ರೀತಿಯಿಂದ ತಬ್ಬಿಕೊಂಡು ಅವರ ಕುತ್ತಿಗೆಗೆ ಗುಲಾಬಿ ಹೂವಿನ ಹಾರ ಹಾಕಿ ಅಭಿನಂದಿಸಿದರು. ನಂತರ ಅವರನ್ನು ಆರ್‌ಆರ್‌ಆರ್‌ ಖ್ಯಾತಿಯ ರಾಮಚರಣ್‌ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.

ಪವನ್ ಕಲ್ಯಾಣ್ ಅವರ ಗೆಲುವನ್ನು ಇಡೀ ಕುಟುಂಬ ಕೇಕ್‌ ಕಟ್‌ ಮಾಡಿ ಸಂಭ್ರಮಿಸಿತು. ಸದ್ಯ ಅಣ್ಣ ತಮ್ಮಂದಿರ ಬಾಂಧವ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗೊದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇವ್‌ ಪಾರ್ಟಿ ಪ್ರಕರಣ: ತೆಲುಗು ಚಿತ್ರರಂಗದಲ್ಲಿ ನಟಿ ಹೇಮಾ ಅಮಾನತಿಗೆ ಹೆಚ್ಚಿದ ಒತ್ತಾಯ