ಕಷ್ಟದ ಸಮಯದಲ್ಲಿದ್ದ ಸ್ನೇಹಿತರ ಬಗ್ಗೆ ಪವಿತ್ರಾ ಗೌಡ ಮನದಾಳದ ಮಾತು

Sampriya
ಸೋಮವಾರ, 10 ಫೆಬ್ರವರಿ 2025 (16:42 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ, ಜಾಮೀನು ಮೂಲಕ ಹೊರಬಂದಿರುವ ಪವಿತ್ರಾ ಗೌಡ ಸದ್ಯ ಟೆಂಪಲ್ ರನ್ ಮಾಡುತ್ತಿದ್ದಾರೆ. ಈಚೆಗೆ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪಾಲ್ಗೊಂಡು, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದರು.

ಇದೀಗ ತಮ್ಮ ಬಿಸಿನೆಸ್ ಕಡೆ ಗಮನಹರಿಸಿರುವ ಪವಿತ್ರಾ ಗೌಡ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಸ್ಟೋರಿಯೊಂದು ವೈರಲ್ ಆಗಿದೆ.  ಸ್ನೇಹ ಮತ್ತು ಸ್ನೇಹಿತರ ಬಗೆಗಿನ ಒಂದು ಸಂದೇಶವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಆಪ್ತರ ಬಗ್ಗೆ ಪವಿತ್ರಾ ಗೌಡ ಮನದಾಳದ ಮಾತುಗಳನ್ನಾಡಿದ್ದಾರೆ.

ಬಹುಭಾಷಾ ನಟಿ ರಾಶಿ ಖಾನ್ನಾ ಅವರು ಸಂದರ್ಶನವೊಂದರಲ್ಲಿ ಸ್ನೇಹಿತರ ಬಗೆಗೆ ಆಡಿದ ಮಾತುಗಳ ವಿಡಿಯೋ ಸಂದೇಶವನ್ನು ಅವರು ಶೇರ್ ಮಾಡಿದ್ದಾರೆ.  ಒಳ್ಳೆಯ ಸ್ನೇಹಿತರ ಸಂಗ ಎಷ್ಟೋ ಮುಖ್ಯ ಎಂದು ನಾನು ಅರಿತೆ. ಅದು ಬಹಳ ಮುಖ್ಯ. ಇದು ಯಾರು ಎಂಬುದನ್ನು ನಿರ್ಧರಿಸುತ್ತೆ. ನನಗೆ ಒಂದಷ್ಟು ಅದ್ಭುತ ಸ್ನೇಹಿತರು ಇದ್ದಾರೆ, ಒಳ್ಳೆಯ ಕೆಲಸಗಳನ್ನು ಮಾಡಲು ಸದಾ ಹುರಿದುಂಬಿಸುತ್ತಾರೆ. ನನಗೆ ಭೇಟಿಯಾಗಲು ಸಮಯ ಸಿಗಲಿಲ್ಲ, ಅದು ಇದು ಎನ್ನುವವರು ಬೇಕಾಗಿಲ್ಲ. ಭೇಟಿಯಾಗದಿದ್ದರು ಪರವಾಗಿಲ್ಲ ಏನ್ ಮಾಡ್ತಾ ಇದ್ದೀಯಾ, ನಿನ್ನ ಬಗ್ಗೆ ನನಗೆ ಖುಷಿಯಿದೆ. ನಿನ್ನ ಜತೆ ನಿಲ್ಲುತ್ತೇವೆ ಎನ್ನುವ ಸ್ನೇಹಿತರು ಬೇಕಾಗಿದ್ದಾರೆ ಎಂದು ರಾಶಿ ಖನ್ನಾ ವಿವರಿಸಿದ್ದರು.

ಇದೇ ವಿಡಿಯೋ ಸಂದೇಶವನ್ನು ಪವಿತ್ರಾ ಗೌಡ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಕಷ್ಟದ ಸಮಯದಲ್ಲಿದ್ದ ಸ್ನೇಹಿತರ ಬಗ್ಗೆ ಪವಿತ್ರಾ ನೆನಪಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿಯೇ ಪ್ರಮುಖ ಟಾರ್ಗೆಟ್‌: ಮತ್ತೊರ್ವ ಮಹಿಳಾ ಸ್ಪರ್ಧಿ ಕಿರಿಕ್‌

ಕಿಚ್ಚ ಸುದೀಪ್ ಗೆ ಈ ವಿಚಾರದಲ್ಲಿ ಬಲವಂತ ಮಾಡಿದ್ದೇ ಪತ್ನಿ ಪ್ರಿಯಾ

ಬೆಳಕಿಲ್ಲದ ದೀಪಾವಳಿಯೊಂದಿಗೆ ನಟ ದರ್ಶನ್‌ಗೆ ಬೆನ್ನು ನೋವಿನ ಸಂಕಟ

ಮುಂದಿನ ಸುದ್ದಿ
Show comments