Webdunia - Bharat's app for daily news and videos

Install App

ದರ್ಶನ್ ಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರಂತೆ ಪವಿತ್ರಾ ಗೌಡ: ಹಾರ್ಡ್ ಡಿಸ್ಕ್ ನಲ್ಲಿ ಅಂತಹದ್ದೇನಿತ್ತು

Krishnaveni K
ಮಂಗಳವಾರ, 10 ಸೆಪ್ಟಂಬರ್ 2024 (12:39 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ಲಿವಿಂಗ್ ರಿಲೇಷನ್ ಶಿಪ್ ಇದ್ದಿದ್ದು ಅವರೇ ಒಪ್ಪಿಕೊಂಡಿದ್ದಾರೆ. ಇವರಿಬ್ಬರ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ನೀಡಿದ್ದಾರೆ ಎನ್ನಲಾದ ಹೇಳಿಕೆ ಭಾರೀ ಕುತೂಹಲ ಮೂಡಿಸಿದೆ.

ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ಸಂಬಂಧ ತಮಗೆ ಗೊತ್ತಾಗಿದ್ದು ಹೇಗೆ ಮತ್ತು ದರ್ಶನ್ ರನ್ನು ಪವಿತ್ರಾ ಹೇಗೆ ಬ್ಲ್ಯಾಕ್ ಮೇಲ್ ಮಾಡಿದ್ದಳು ಎಂಬುದನ್ನು ವಿಜಯಲಕ್ಷ್ಮಿ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. 2014 ರಲ್ಲಿ ದರ್ಶನ್ ಫೋನ್ ಗೆ ಒಂದು ಹುಡುಗಿಯಿಂದ ಮೆಸೇಜ್ ಬಂದಿತ್ತು. ಸಿನಿಮಾದವರಲ್ವಾ ಯಾರೋ ಮಾಡಿರ್ತಾರೆ ಎಂದುಕೊಂಡಿದ್ದೆ.

2015 ರಲ್ಲಿ ಅದೇ ಹುಡುಗಿ ನನಗೆ ಕರೆ ಮಾಡಿ ನಿನ್ನ ಗಂಡ ದರ್ಶನ್ ನನ್ನ ಜೊತೆ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದಾರೆ. ಪದೇ ಪದೇ ಮನೆಗೆ ಬರುತ್ತಿರುತ್ತಾರೆ. ಅವರಿಗೆ ಬುದ್ಧಿ ಹೇಳು ಎಂದಿದ್ದರು. ಯಾರೋ ಏನೋ ಹೇಳುತ್ತಿದ್ದಾರೆ ಎಂದು ನಾನು ಆಕೆಗೆ ಬೈದು ಕರೆ ಕಟ್ ಮಾಡಿದ್ದೆ.

ಆದರೆ ಅದಾದ ಬಳಿಕ ನನ್ನ ಪತಿ ದರ್ಶನ್ ಆಕೆಗೆ 2018 ರಲ್ಲಿ ಮನೆ ಖರೀದಿಸಿ ಕೊಟ್ಟ ಬಗ್ಗೆ ಮತ್ತು ಅದೇ ವರ್ಷ ದುಬಾರಿ ಬೆಲೆಯ ಕಾರು ಖರೀದಿಸಿ ಕೊಟ್ಟ ಬಗ್ಗೆ ಆಪ್ತರಿಂದ ತಿಳಿಯಿತು. ಆಗ ನನಗೂ ದರ್ಶನ್ ನಡುವೆ ಜಗಳವಾಯಿತು. ಆದರೆ ಇದು ನನ್ನ ದುಡ್ಡು ನೀನು ಯಾರು ಕೇಳಕ್ಕೆ ಎಂದು ಬಾಯಿಮುಚ್ಚಿಸಿದರು. ಆದರೆ ಈ ಬಗ್ಗೆ ನಮ್ಮಿಬ್ಬರ ನಡುವೆ ವೈಮನಸ್ಯಗಳಿದ್ದರೂ ನಾವು ಅನ್ಯೋನ್ಯವಾಗಿಯೇ ಇದ್ದೆವು ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.

ಆದರೆ ದರ್ಶನ್ ಗೆ ಪವಿತ್ರಾ ಗೌಡ ಅವರಿಬ್ಬರ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು ಎಂಬ ವಿಚಾರ ನನಗೆ ಆಪ್ತರಿಂದ ತಿಳಿಯಿತು. ಆಕೆಯ ಬಳಿ ಒಂದು ಹಾರ್ಡ್ ಡಿಸ್ಕೇ ಇತ್ತು. ಇದರಲ್ಲಿ ದರ್ಶನ್ ಜೊತೆಗಿನ ಖಾಸಗಿ ಕ್ಷಣಗಳನ್ನು ಸೇವ್ ಮಾಡಿಟ್ಟುಕೊಂಡಿದ್ದಳು. ಅದನ್ನು ಬಳಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು. ಈ ಹಾರ್ಡ್ ಡಿಸ್ಕ್ ನ್ನು ಅವಳ ತಾಯಿ ಮನೆಯಲ್ಲಿಟ್ಟುಕೊಂಡಿದ್ದಳು ಎಂದು ವಿಜಯಲಕ್ಷ್ಮಿ ಹೇಳಿರುವುದಾಗಿ ವರದಿಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ಸತೀಶ್ ನೀನಾಸಂ ಸಿನಿಮಾ ಶೂಟಿಂಗ್ ಪೂರ್ಣ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

ಮುಂದಿನ ಸುದ್ದಿ
Show comments