Select Your Language

Notifications

webdunia
webdunia
webdunia
webdunia

ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ದುಬೈಗೆ ಹೋಗಿದ್ದಕ್ಕೆ ಪವಿತ್ರಾ ಗೌಡಗೆ ಹೊಟ್ಟೆಯುರಿ: ಆಕೆ ಮಾಡಿದ್ದೇನು

Darshan Thoogudeepa-Vijayalakshmi-Pavithra Gowda

Krishnaveni K

ಬೆಂಗಳೂರು , ಮಂಗಳವಾರ, 10 ಸೆಪ್ಟಂಬರ್ 2024 (09:53 IST)
ಬೆಂಗಳೂರು: ಸಿನಿಮಾ ರಂಗದಲ್ಲಿ ಡಿ ಬಾಸ್ ಎಂದು ಘರ್ಜಿಸುತ್ತಿದ್ದ ನಟ ದರ್ಶನ್ ಸ್ಥಿತಿ ಕೌಟುಂಬಿಕವಾಗಿ ಇಬ್ಬರು ಹೆಂಡಿರ ಮುದ್ದಿನ ಗಂಡ ಎಂಬ ಸ್ಥಿತಿಯಾಗಿತ್ತು. ನಾಲ್ಕು ತಿಂಗಳ ಹಿಂದೆ ನಡೆದ ಘಟನೆಯನ್ನು ಪವಿತ್ರಾ ತನ್ನೊಡನೆ ಹೇಳಿರುವುದನ್ನು ಸ್ನೇಹಿತೆ ಸಮತಾ ಹೇಳಿರುವುದಾಗಿ ಈಗ ಚಾರ್ಜ್ ಶೀಟ್ ನಲ್ಲಿ ದಾಖಲಾಗಿದೆ.

ನಾಲ್ಕು ತಿಂಗಳ ಹಿಂದಷ್ಟೇ ದರ್ಶನ್ ಮತ್ತು  ವಿಜಯಲಕ್ಷ್ಮಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ದುಬೈನಲ್ಲಿ ದಂಪತಿ ಆತ್ಮೀಯರೊಂದಿಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಈ ಫೋಟೋವೇ ಪವಿತ್ರಾ ಗೌಡ ಹೊಟ್ಟೆ ಉರಿಸಿತ್ತು.

ದರ್ಶನ್ ತಮ್ಮ ಪತ್ನಿ ಜೊತೆ ದುಬೈಗೆ ಹೋಗಿದ್ದಕ್ಕೆ ಪವಿತ್ರಾ ಮುನಿಸಿಕೊಂಡಿದ್ದಳಂತೆ. ಈ ಬಗ್ಗೆ ಸಮತಾ ಹೇಳಿಕೆ ನೀಡಿದ್ದಾರೆ. ‘ಪವಿತ್ರಾ ಮತ್ತು ದರ್ಶನ್ ನಡುವೆ ಏನೇ ಮನಸ್ತಾಪವಾದರೂ ನನಗೆ ಗೊತ್ತಾಗುತ್ತಿತ್ತು. ಪವಿತ್ರಾ ಎಲ್ಲವನ್ನೂ ನನ್ನ ಬಳಿ ಹಂಚಿಕೊಳ್ಳುತ್ತಿದ್ದಳು. ನಾಲ್ಕು ತಿಂಗಳ ಹಿಂದೆ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ದುಬೈಗೆ ಹೋಗಿದ್ದರು. ಆಗ ಪವಿತ್ರಾ ಸಿಟ್ಟಾಗಿದ್ದರು. ಈ ವಿಚಾರವಾಗಿ ದರ್ಶನ್ ಜೊತೆ ಕಿರಿಕ್ ಆಗಿತ್ತು. ಇಬ್ಬರೂ ಕೆಲವು ಸಮಯ ಮಾತನಾಡಿರಲಿಲ್ಲ. ರೇಣುಕಾಸ್ವಾಮಿ ಕಿಡ್ನ್ಯಾಪ್ ಆದ ಬಳಿಕವೇ ಇಬ್ಬರೂ ಮಾತನಾಡಿದ್ದು’ ಎಂದು ಸಮತಾ ಹೇಳಿದ್ದಾಳೆ.

ಅಷ್ಟೇ ಅಲ್ಲ, ಶೆಡ್ ಗೆ ಹೋಗದಂತೆ ಪವಿತ್ರಾಗೆ ಕಾಲ್ ಮಾಡುವಾಗ ಬುದ್ಧಿವಾದ ಹೇಳಿದ್ದೆ. ಆದರೆ ಅಷ್ಟರಲ್ಲಿ ದರ್ಶನ್ ಬಂದರು ಎಂದು ಪವಿತ್ರಾ ಕರೆ ಕಟ್ ಮಾಡಿದ್ದರು. ಶೆಡ್ ಗೆ ಹೋಗಿ ಬಂದ ಮೇಲೆ ಕಾಲ್ ಮಾಡಿದ್ದಳು. ಆಗ ರೇಣುಕಾಸ್ವಾಮಿ ಕೈಯಲ್ಲಿ ಕ್ಷಮೆ ಕೇಳಿಸಿದ್ದಾಗಿ ಹೇಳಿದ್ದಳು’ ಎಂದು ಚಾರ್ಜ್ ಶೀಟ್ ನಲ್ಲಿ ಸಮತಾ ಹೇಳಿಕೆ ನೀಡಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿಯರಾದ ರಾಗಿಣಿ ದ್ವಿವೇದಿ, ಶುಭ ಪೂಂಜಾಗೂ ರೇಣುಕಾಸ್ವಾಮಿ ಅಶ್ಲೀಲ ಸಂದೇಶ