Webdunia - Bharat's app for daily news and videos

Install App

ನೀನಾಸಂ ಸತೀಶ್ ‘ಚಂಬಲ್’ನಲ್ಲಿದೆ ಈ ಐಎಎಸ್ ಅಧಿಕಾರಿಯ ರಿಯಲ್ ಕಹಾನಿ

Webdunia
ಭಾನುವಾರ, 3 ಫೆಬ್ರವರಿ 2019 (09:17 IST)
ಬೆಂಗಳೂರು: ನೀನಾಸಂ ಸತೀಶ್ ಮತ್ತೆ ಸುದ್ದಿ ಮಾಡುತ್ತಿದ್ದಾರೆ. ಅವರ ಸಿನಿಮಾಗಳೇ ಹಾಗೆ. ವಿಶಿಷ್ಟ ಕತೆಯಿಂದಲೇ ಸುದ್ದಿಯಾಗುತ್ತವೆ. ಈ ಬಾರಿ ಚಂಬಲ್ ಸಿನಿಮಾ ಮೂಲಕ ಸತೀಶ್ ಸಿನಿಮಾ ಭಾರೀ ವೈರಲ್ ಆಗಿದೆ.


ಚಂಬಲ್ ಟ್ರೈಲರ್ ಬಿಡುಗಡೆಯಾಗಿದ್ದು, ಇದನ್ನು ನೋಡಿದ ವೀಕ್ಷಕರು ಅರೇ ಇದು ಅನುಮಾನಸ್ಪದವಾಗಿ ಸಾವನ್ನಪ್ಪಿದ ಐಎಎಸ್ ಅಧಿಕಾರಿ ಡಿಕೆ ರವಿ ಕಹಾನಿ ಅಲ್ವಾ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಟ್ರೈಲರ್ ನೋಡಿದರೆ ಇದು ಡಿಕೆ ರವಿ ಕತೆಯಂತೇ ಇದೆ. ನೀನಾಸಂ ಸತೀಶ್ ಜಿಲ್ಲಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ, ಅವರು ಕರಗ ಹೊತ್ತು ಕುಣಿಯುವ ಸೀನ್, ಸರ್ಕಾರಿ ಜಮೀನು ಉಳಿಸಿಕೊಳ್ಳಲು ಮಾಡುವ ಸಾಹಸ, ಮುಂತಾದ ದೃಶ್ಯಗಳನ್ನು ನೋಡಿದರೆ ಇದು ಡಿಕೆ ರವಿ ಜೀವನಗಾಥೆ ಎನ್ನುವ ಅನುಮಾನ ಮತ್ತಷ್ಟು ಹೆಚ್ಚುತ್ತದೆ. ಆದರೆ ಚಿತ್ರತಂಡ ಎಲ್ಲೂ ಈ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ.

ಆದರೆ ಡಿಕೆ ರವಿ ಕತೆಯನ್ನೇ ಹೋಲುತ್ತಿರುವುದರಿಂದ ಜನರು ಕುತೂಹಲದಿಂದ ಟ್ರೈಲರ್ ವೀಕ್ಷಿಸುತ್ತಿದ್ದಾರೆ. ಜೇಕಬ್ ವರ್ಗೀಸ್ ನಿರ್ದೇಶನದ ಈ ಸಿನಿಮಾ ಸತ್ಯ ಘಟನೆಗಳ ಆಧಾರಿತ ಎಂದಷ್ಟೇ ಚಿತ್ರತಂಡ ಇದುವರೆಗೆ ಹೇಳಿದೆ. ಯಾವ ಅಧಿಕಾರಿ ಎನ್ನುವುದು ವೀಕ್ಷಕರ ಊಹೆಗೆ ಬಿಟ್ಟಿದ್ದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಣ್ಣಾವ್ರ ಜೊತೆ ವಿಷ್ಣುವರ್ಧನ್ ಎಲ್ಲರೂ ಅಂದುಕೊಂಡಿದ್ದೇ ಬೇರೆ ಇದ್ದಿದ್ದೇ ಬೇರೆ

ವಿವಾದದಿಂದಾಗಿ ಕರ್ಣ ಸೀರಿಯಲ್ ನಿಂದ ಹೊರಬಂದರಾ ಭವ್ಯಾ ಗೌಡ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ಸತೀಶ್ ನೀನಾಸಂ ಸಿನಿಮಾ ಶೂಟಿಂಗ್ ಪೂರ್ಣ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ಮುಂದಿನ ಸುದ್ದಿ
Show comments