Select Your Language

Notifications

webdunia
webdunia
webdunia
webdunia

ಮಗ-ಸೊಸೆ ವಿಚ್ಛೇದನ: ಭಾವುಕರಾದ ನಾಗಾರ್ಜುನ

ಮಗ-ಸೊಸೆ ವಿಚ್ಛೇದನ: ಭಾವುಕರಾದ ನಾಗಾರ್ಜುನ
ಹೈದರಾಬಾದ್ , ಶನಿವಾರ, 2 ಅಕ್ಟೋಬರ್ 2021 (20:31 IST)
ಹೈದರಾಬಾದ್: ಪುತ್ರ ನಾಗಚೈತನ್ಯ ಮತ್ತು ಸಮಂತಾ ಋತು ಪ್ರಭು ವೈವಾಹಿಕ ಜೀವನ ಮುರಿದು ಬಿದ್ದ ಬೆನ್ನಲ್ಲೇ ನಟ ನಾಗಾರ್ಜುನ ಅಕ್ಕಿನೇನಿ ಸಾಮಾಜಿಕ ಜಾಲತಾಣದಲ್ಲಿ ಭಾವುಕರಾಗಿ ಸಂದೇಶವೊಂದನ್ನು ಬರೆದಿದ್ದಾರೆ.


ನಾಗಚೈತನ್ಯ ಮತ್ತು ಸಮಂತಾ ನಡುವಿನ ಸಂಬಂಧ ಸರಿಪಡಿಸಲು ನಾಗಾರ್ಜುನ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ. ಹಾಗಿದ್ದರೂ ಪ್ರಯೋಜನವಾಗಿಲ್ಲ. ಇಂದು ಇಬ್ಬರೂ ಸಾಮಾಜಿಕ ಜಾಲತಾಣ ಮೂಲಕ ಬೇರೆಯಾಗುತ್ತಿರುವುದಾಗಿ ಪ್ರಕಟಿಸಿದ್ದರು.

ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ನಾಗಾರ್ಜುನ, ‘ಭಾರವಾದ ಹೃದಯದಿಂದ ಇದನ್ನು ಹೇಳುತ್ತಿದ್ದೇನೆ. ಸ್ಯಾಮ್ ಮತ್ತು ಚೈ ನಡುವೆ ಆಗಿದ್ದು ದುರದೃಷ್ಟಕರ. ಗಂಡ-ಹೆಂಡತಿ ನಡುವೆ ನಡೆಯುವುದು ತೀರಾ ವೈಯಕ್ತಿಕ. ಸ್ಯಾಮ್ ಮತ್ತು ಚೈ ಇಬ್ಬರೂ ನನಗೆ ಪ್ರೀತಿ ಪಾತ್ರರು. ನನ್ನ ಕುಟುಂಬ ಯಾವತ್ತೂ ಸ್ಯಾಮ್ ಜೊತೆ ಕಳೆದ ಒಳ್ಳೆಯ ಕ್ಷಣಗಳನ್ನು ನೆನಪು ಮಾಡಿಕೊಳ್ಳುತ್ತದೆ ಮತ್ತು ಅವಳು ಯಾವತ್ತೂ ನಮಗೆ ಪ್ರೀತಿ ಪಾತ್ರಳಾಗಿಯೇ ಇರುತ್ತಾಳೆ. ಇಬ್ಬರಿಗೂ ಧೈರ್ಯಕೊಟ್ಟು ದೇವರು ಕಾಪಾಡಲಿ’ ಎಂದು ನಾಗಾರ್ಜುನ ಭಾವುಕರಾಗಿ ಸಂದೇಶ ಬರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಕಿನೇನಿ ಕುಟುಂಬದಿಂದ 200 ಕೋಟಿ ಜೀವನಾಂಶ ನಿರಾಕರಿಸಿದರಾ ಸಮಂತಾ?!