Webdunia - Bharat's app for daily news and videos

Install App

Madenur Manu: ಒಬ್ಬರು ಲೇಡಿ ಡಾನ್, ಇಬ್ಬರು ಹೀರೋಗಳು ನನ್ನನ್ನು ಸಿಕ್ಕಿ ಹಾಕಿಸಿದ್ದಾರೆ: ಮಡೆನೂರು ಮನು

Krishnaveni K
ಗುರುವಾರ, 22 ಮೇ 2025 (16:47 IST)
Photo Credit: Instagram
ಬೆಂಗಳೂರು: ಒಬ್ಬರು ಲೇಡಿ ಡಾನ್ ಮತ್ತು ಇಬ್ಬರು ಹೀರೋಗಳು ಸೇರಿಸಿಕೊಂಡು ಬೇಕೆಂದೇ ನನ್ನ ಸಿನಿಮಾ ಬಿಡುಗಡೆ ಹಿಂದಿನ ದಿನ ಕೇಸ್ ಹಾಕಿ ಸಿಕ್ಕಿ ಹಾಕಿಸಿದ್ದಾರೆ ಎಂದು ಅರೆಸ್ಟ್ ಆಗುವ ಮುನ್ನ ಮಡೆನೂರು ಮನು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ಸಹ ನಟಿಯ ಮೇಲೆ ರೇಪ್ ಮಾಡಿದ ಆರೋಪದಲ್ಲಿ ಮಡೆನೂರು ಮನು ಮೇಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇದೀಗ ಮನುವನ್ನು ಅರೆಸ್ಟ್ ಕೂಡಾ ಮಾಡಲಾಗಿದೆ.

ನಾಳೆ ಮನು ನಾಯಕರಾಗಿರುವ ಚೊಚ್ಚಲ ಸಿನಿಮಾ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ತಮ್ಮ ಸಿನಿಮಾ ಬಿಡುಗಡೆ ಹಿಂದಿನ ದಿನವೇ ಮನು ವಿರುದ್ಧ ರೇಪ್ ಕೇಸ್ ದಾಖಲಾಗಿದೆ. ಅತ್ಯಾಚಾರ ಮಾಡಿ ವಂಚನೆ ಮಾಡಿದ್ದಾರೆಂದು ಪ್ರಕರಣ ದಾಖಲಾದ ಬೆನ್ನಲ್ಲೇ ಮನು ವಿಡಿಯೋ ಸಂದೇಶ ಕಳುಹಿಸಿದ್ದು, ನನ್ನ ಸಮಸ್ಯೆ ಏನೇ ಇರಲಿ, ನಾಳೆ ನಮ್ಮ ಸಿನಿಮಾ ನೋಡಿ ಎಂದು ಮನವಿ ಮಾಡಿದ್ದಾರೆ.

‘ನಿಮಗೆಲ್ಲಾ ವಿಚಾರ ಗೊತ್ತಿರಬಹುದು. ಇದು ಉದ್ದೇಶಪೂರ್ವಕವಾಗಿ ಎಂದು ನಾನು ಹೇಳಬೇಕಾಗಿಲ್ಲ, ನಿಮಗೇ ಗೊತ್ತಾಗುತ್ತದೆ. ನಾವು ಕಷ್ಟಪಟ್ಟು ಮಾಡಿದ ಸಿನಿಮಾ ನಾಳೆ ರಿಲೀಸ್ ಆಗುವಾಗ ಎಫ್ಐಆರ್ ಹಾಕುವ ಅಗತ್ಯವಿರಲಿಲ್ಲ.  ಯಾಕೆಂದರೆ ಇತ್ತೀಚೆಗಿನ ದಿನಗಳಲ್ಲಿ ನಾನು ಮಾತನಾಡಿದ್ದೇನೆ, ಏನು, ಹೆಂಗೆ ಎಂದು ಕೇಳಿದಾಗ ಕೆಲವು ಕ್ಲಾರಿಟಿನೂ ಕೊಟ್ಟಿದ್ದಾಳೆ. ಹಿಂಗಿಂಗೆ ನಾನು ಸುಮ್ಮನಿದ್ದರೂ ಬೇರೆಯವರು ಬಿಡ್ತಿಲ್ಲ ಎಂದಿದ್ದಾಳೆ. ಅವರು ಯಾರು ಹೇಳಿಕೊಡ್ತಿದ್ದಾರೆ ಎಂದೂ ನನ್ನಲ್ಲಿ ಬಾಯ್ಬಿಟ್ಟಿದ್ದಾಳೆ. ಇಬ್ಬರು ಹೀರೋಗಳು, ಒಬ್ಬ ಲೇಡಿ ಡಾನ್, ಟೋಟಲ್ ಮೂರು ಜನ. ಅವರು ಯಾರು ಎಂತಲೂ ನಾನು ರಿವೀಲ್ ಮಾಡ್ತೀನಿ. ಪ್ರತಿಯೊಂದಕ್ಕೂ ಸಾಕ್ಷಿ ಕೊಡ್ತೀನಿ. ನಾನು ಯಾರಿಗೆ ಏನು ಮಾಡಿದ್ದೀನಿ ಗೊತ್ತಿಲ್ಲ? ನನ್ನ ಸಾವನ್ನೂ ಬಯಸಿದ್ದಾರಂತೆ. ಅವನು ಸಾಯೋ ಬದಲು ಕಾಮಿಡಿ ಕಿಲಾಡಿಯ ಇವನು ಸಾಯಬಾರದಿತ್ತಾ ಎಂದು ತಮಾಷೆ ಮಾಡಿದ್ದರಂತೆ. ನಾನು ನಂದಾಯ್ತು ನನ್ನ ಕೆಲಸ ಆಯ್ತು ಎಂದು ಇದ್ದವನು. ಈಗ ನನಗೆ ಒಂದೇ ಓಡ್ತಿರೋದು ತಲೆಯಲ್ಲಿ. ಒಂದು, ಒಂದೂವರೆ ತಿಂಗಳಿನಿಂದ ನಮ್ಮ ಸಿನಿಮಾ ನೋಡಿ ಎಂದು ಓಡಾಡಿದ್ದೀನಿ. ಪ್ರತಿಯೊಬ್ಬರ ಮನೆಗೆ ಹೋಗಿ ಇನ್ವಿಟೇಷನ್ ಕೊಟ್ಟು ಬಂದಿದ್ದೀನಿ. ಸಿನಿಮಾಗೆ ಮೋಸ ಆಗಬಾರದು. ನಿರ್ಮಾಪಕರು ಎಲ್ಲೋ ಹೋಗಿ ಹಣ ತಂದಿರ್ತಾರೆ. ನನ್ನ ನಂಬಿ ದುಡ್ಡು ಹಾಕಿದ ನಿರ್ಮಾಪಕರು, ಟೀಂಗೆ ತೊಂದರೆಯಾಗಬಾರದು. ನನ್ನ ಮೇಲೆ ಬಂದಿರುವ ಈ ಆರೋಪಕ್ಕೆ ಎಲ್ಲದಕ್ಕೂ ಸಾಕ್ಷಿ ಸಮೇತ ನಿಮಗೆ ಕ್ಲಾರಿಟಿ ಕೊಡ್ತೀನಿ’ ಎಂದು ಮನು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಹೋಗಲಿರುವ ಸ್ಪರ್ಧಿಗಳು ಯಾರೆಲ್ಲಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಮುಂದಿನ ಸುದ್ದಿ
Show comments