Webdunia - Bharat's app for daily news and videos

Install App

ಇಷ್ಟೊಂದು ಧ್ವೇಷಿಸಬೇಡಿ, ಒಂದು ತೊಟ್ಟು ವಿಷ ಕೊಡಿ ಸಾಕು: ಮಡೆನೂರು ಮನು

Krishnaveni K
ಶನಿವಾರ, 12 ಜುಲೈ 2025 (10:24 IST)
ಬೆಂಗಳೂರು: ನನ್ನ ಇಷ್ಟೊಂದು ಧ್ವೇಷಿಸಬೇಡಿ. ಇದರ ಬದಲು ಒಂದು ತೊಟ್ಟು ವಿಷ ಕೊಡಿ ಸಾಕು. ಏನು ದೃಷ್ಟಿ ಬಿತ್ತೋ, ಏನೋ ನನ್ನ ದುರಾದೃಷ್ಟ ಈ ರೀತಿ ಆಗಿದೆ ಎಂದು ಮಡೆನೂರು ಮನು ಪತ್ರಿಕಾಗೋಷ್ಠಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.

ಸಹ ನಟಿ ಮೇಲೆ ಅತ್ಯಾಚಾರ, ಬಲವಂತದಿಂದ ತಾಳಿ ಕಟ್ಟಿದ ಆರೋಪಕ್ಕೊಳಗಾಗಿ ಜೈಲು ಸೇರಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಅವರದ್ದು ಎನ್ನಲಾದ ಅಡಿಯೋ ಒಂದು  ವೈರಲ್ ಆಗಿತ್ತು. ಈ ಅಡಿಯೋದಲ್ಲಿ ಶಿವಣ್ಣ, ಧ್ರುವ ಸರ್ಜಾ, ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಇದರಿಂದಾಗಿ ಅವರಿಗೆ ಈಗ ಚಿತ್ರರಂಗದಲ್ಲಿ ಅವಕಾಶವಿಲ್ಲದಂತಾಗಿದೆ.

ಇದೀಗ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ನಾನು ಯಾರಿಗೂ ಸಾವು ಬಯಸಲ್ಲ. ಡ್ರಿಂಕ್ಸ್ ಒಳಗೆ ಏನೋ ಮಿಕ್ಸ್ ಮಾಡಿ ಹೀಗೆಲ್ಲಾ ಆಗಿದೆ. ಮೂರು ವರ್ಷದಿಂದ ಡಯಟ್ ಮಾಡುತ್ತಿದ್ದರಿಂದ ಕುಡಿಯುತ್ತಿರಲಿಲ್ಲ. ಆ ಅಡಿಯೋ ಸತ್ಯ ಆಗಿದ್ದರೆ ಅದನ್ನು ಡಿಲೀಟ್ ಮಾಡಿಸುತ್ತಿದ್ದೆ. ಇಷ್ಟುವರ್ಷದಿಂದ ಕಷ್ಟಪಟ್ಟು ಬಂದವನು ಹೀಗೆ ಯಾಕೆ ಮಾಡ್ತೀನಿ. ನನಗೆ ಹಣವೂ ಇಲ್ಲ ಬ್ಯಾಕ್ ಗ್ರೌಂಡ್ ಇಲ್ಲ. ನನಗೆ ದುಡ್ಡು ಇದ್ದಿದ್ರೆ ಅವರನ್ನು ನೇರವಾಗಿ ಹೋಗಿ ಹೊಡೆಸುತ್ತಿದ್ದೆ.

ಆ ಲೇಡಿ ಮನೆಯಲ್ಲಿ ನನಗೆ ಒಂದು ಡ್ರಿಂಕ್ಸ್ ನೀಡಲಾಗಿತ್ತು. ಅದರಲ್ಲಿ ಏನೋ ಮಿಕ್ಸ್ ಮಾಡಿದ್ದರು ಎಂದು ಅನುಮಾನವಿದೆ. ಆ ಅಡಿಯೋ ಫ್ರೆಂಡ್ಸ್ ಸರ್ಕಲ್ ಬಳಿಯಿತ್ತು. ಅದನ್ನು 50000 ರೂ. ಕೊಟ್ಟು ಖರೀದಿ ಮಾಡಿದ್ದಾರಂತೆ. ಹೀಗಾಗಿ ಆ ಅಡಿಯೋ ಯಾರು ರಿಲೀಸ್ ಮಾಡಿದ್ದು ಎಂದು ಗೊತ್ತಾಗಿದೆ. ನನ್ನ ಮೇಲೆ ಇಷ್ಟು ಧ್ವೇಷ ಸಾಧಿಸುವ ಬದಲು ವಿಷ ಕೊಡಿ ಎಂದಿದ್ದಾರೆ ಮಡೆನೂರು ಮನು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

ಮುಂದಿನ ಸುದ್ದಿ
Show comments