ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Sampriya
ಸೋಮವಾರ, 7 ಜುಲೈ 2025 (19:06 IST)
ಬೆಂಗಳೂರು: ಸಹನಟಿಗೆ ಲೈಂಗಿಕ ದೌರ್ಜನ್ಯ ನೀಡಿದ ದೂರಿನ ಪ್ರಕರಣದಲ್ಲಿ ಜೈಲು ಸೇರಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಜೈಲಿನಿಂದ ಹೊರಬಂದಿದ್ದಾರೆ. ಇದರ ಬೆನ್ನಲ್ಲೇ ಮಡೆನೂರು ಮನು ಕನ್ನಡದ ಕೆಲ ನಟರ ಬಗ್ಗೆ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. 

ಈ ಆಡಿಯೋ ಸಂಬಂಧ ಮಡೆನೂರು ಮನು, ನಟರಾದ ಶಿವಣ್ಣ ಹಾಗೂ ಧ್ರುವ ಸರ್ಜಾ, ದರ್ಶನ್  ಬಳಿ ಕ್ಷಮೆ ಕೋರಿದ್ದರು.  ಇದೀಗ ನಟ ದರ್ಶನ್ ತೂಗುದೀಪ್ ಅವರಿಗೆ ಕ್ಷಮೆ ಕೇಳಿ ವಿಡಿಯೋ ರಿಲೀಸ್ ಮಾಡಿದ್ದಾರೆ. 

ಆ ವಿಡಿಯೋದಲ್ಲಿ "ಇತ್ತೀಚಿಗೆ ಒಂದು ಆಡಿಯೋ ವೈರಲ್ ಆದಾಗ, ಬಹಿರಂಗವಾಗಿ ಒಂದು ಕ್ಷಮೆ ಯಾಚಿಸಿದ್ದೆ. ಡಿ ಬಾಸ್ ಫ್ಯಾನ್ಸ್ ನನಗೆ ಮೆಸೇಜ್, ಕಮೆಂಟ್ಸ್ ಮಾಡಿದ್ರು, ಫೋನ್ ಕೂಡ ಮಾಡಿದ್ರು. 'ಬಾಸ್‌ಗೆ ಕ್ಷಮೆ ಕೇಳಿದ್ರಾ, ಹೋಗಿದ್ರಾ, ಮೀಟ್ ಮಾಡಿದ್ರಾ, ಒಂದು ಸತಿ ಮೀಟ್ ಮಾಡಿ, ಮತ್ತೆ ನಿಮ್ಮ ಸಿನಿಮಾವನ್ನ (ಕುಲದಲ್ಲಿ ಕೀಳ್ಯಾವುದೋ) ರೀ-ರಿಲೀಸ್ ಮಾಡಿಸೋಣ..' ಅಂತೆಲ್ಲಾ ಸುಮಾರು ಜನ ಪ್ರೀತಿಯಿಂದ ಕೇಳಿದ್ದಾರೆ" ಎಂದು ಮನು ಹೇಳಿದ್ದಾರೆ.

"ನಾನು ಮೀಟ್ ಮಾಡೋಕೆ ಪ್ರಯತ್ನಿಸಿದೆ. ಫೋನ್ ಕೂಡ ಮಾಡಿದೆ. ಆದರೆ ಬಾಸ್ (ದರ್ಶನ್) ಬ್ಯುಸಿ ಇದ್ದಾರೆ ಅಂತ ಗೊತ್ತಾಯ್ತು. ಹಂಗಾಗಿ ಬಹಿರಂಗವಾಗಿ ನಾನೇ ಒಂದು ಕ್ಷಮೆ ಯಾಚಿಸೋಣ ಅಂತ ಒಂದು ವಿಡಿಯೋ ಮಾಡ್ತಾ ಇದೀನಿ. ಡಿಬಾಸ್, ದಯಮಾಡಿ ಪುಟ್ಟ ಕಲಾವಿದ ನಾನು, ಸಹವಾಸಗಳನ್ನ ಮಾಡಿ, ಜೊತೆಲೇ ಇರೋರನ್ನ ನಂಬಿ, ಈ ಒಂದು ಆಡಿಯೋಗೆ ಬಲಿಯಾಗಿದ್ದೀನಿ ದಯಮಾಡಿ ನನ್ನನ್ನು ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ..." ಎಂದು ಮನು ಕೇಳಿಕೊಂಡಿದ್ದಾರೆ.

<> https://www.instagram.com/reel/DLwdldkpsCt/?utm_source=ig_web_copy_link

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದೇವರ ಮಕ್ಕಳಿಗೆ ದೀಪಾವಳಿಗೆ ಸರ್ಪ್ರೈಸ್ ನೀಡಿದ ಸಮಂತಾ ರುತ್ ಪ್ರಭು

ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ: ದೀಪಾವಳಿ ದಿನ ಗುಡ್‌ನ್ಯೂಸ್ ಹಂಚಿಕೊಂಡ ರಶ್ಮಿ ಪ್ರಭಾಕರ್

ಕಾಂತಾರ ಸಕ್ಸನ್‌ ಬೆನ್ನಲ್ಲೇ ಬಿಹಾರದ ಪವರ್‌ಫುಲ್‌ ದೇಗುಲಕ್ಕೆ ಡಿವೈನ್‌ ಸ್ಟಾರ್‌ ರಿಷಭ್‌ ಶೆಟ್ಟಿ ಭೇಟಿ

ಮೊದಲ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಎಂಟ್ರಿ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಇವರೇ

ಅ.25ರಂದು ಅಪ್ಪು ಫ್ಯಾನ್‌ ಡಮ್‌ ಆ್ಯಪ್‌ ಬಿಡುಗಡೆ: ಕಿಚ್ಚ ಸುದೀಪ್ ಧ್ವನಿಯಲ್ಲಿ ಹೊರಬಿತ್ತು ಟ್ರೇಲರ್

ಮುಂದಿನ ಸುದ್ದಿ