Select Your Language

Notifications

webdunia
webdunia
webdunia
webdunia

ದಿಡೀರ್ ಆಗಿ ಥಿಯೇಟರ್ ನಿಂದ ಪ್ರದರ್ಶನ ಹಿಂಪಡೆದ ಕೃಷ್ಣ ಟಾಕೀಸ್ ಸಿನಿಮಾ

ದಿಡೀರ್ ಆಗಿ ಥಿಯೇಟರ್ ನಿಂದ ಪ್ರದರ್ಶನ ಹಿಂಪಡೆದ ಕೃಷ್ಣ ಟಾಕೀಸ್ ಸಿನಿಮಾ
ಬೆಂಗಳೂರು , ಮಂಗಳವಾರ, 20 ಏಪ್ರಿಲ್ 2021 (09:03 IST)
ಬೆಂಗಳೂರು: ನಟ ಅಜೇಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’ ಸಿನಿಮಾ ಇದೇ ಶುಕ್ರವಾರ ತೆರೆಗೆ ಬಂದಿತ್ತು. ಆದರೆ ಈಗ ಚಿತ್ರತಂಡ ದಿಡೀರ್ ಆಗಿ ಪ್ರದರ್ಶನ ಹಿಂಪಡೆದಿದೆ.


ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ ಜನರ ಸುರಕ್ಷತೆ ದೃಷ್ಟಿಯಲ್ಲಿಟ್ಟುಕೊಂಡು ಸಿನಿಮಾ ಪ್ರದರ್ಶನ ಸದ್ಯಕ್ಕೆ ಥಿಯೇಟರ್ ನಿಂದ ಹಿಂಪಡೆಯುತ್ತಿರುವುದಾಗಿ ಚಿತ್ರತಂಡ ಪ್ರಕಟಿಸಿದೆ.

ಕೊರೋನಾ ಇಳಿಮುಖವಾದ ಬಳಿಕ ಮತ್ತೆ ಥಿಯೇಟರ್ ನಲ್ಲಿ ಸಿನಿಮಾ ಮರು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ಹಲವು ಸಿನಿಮಾಗಳು ಕೊರೋನಾ ಕಾರಣದಿಂದ ಸದ್ಯಕ್ಕೆ ಥಿಯೇಟರ್ ನಲ್ಲಿ ಬಿಡುಗಡೆ ಮಾಡದೇ ಇರಲು ನಿರ್ಧರಿಸಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಟಿವಿ ಪತ್ರಕರ್ತೆಯಾಗಲಿರುವ ನಟಿ ಶ್ರುತಿಹಾಸನ್