Select Your Language

Notifications

webdunia
webdunia
webdunia
webdunia

ಖ್ಯಾತ ಗಾಯಕ ಯೇಸುದಾಸ್ ಗೆ ಕೊನೆಗೂ ಅನಂತ ಪದ್ಮನಾಭ ದೇವಾಲಯಕ್ಕೆ ಪ್ರವೇಶ ಸಿಕ್ಕಿತು!

ಖ್ಯಾತ ಗಾಯಕ ಯೇಸುದಾಸ್ ಗೆ ಕೊನೆಗೂ ಅನಂತ ಪದ್ಮನಾಭ ದೇವಾಲಯಕ್ಕೆ ಪ್ರವೇಶ ಸಿಕ್ಕಿತು!
ತಿರುವನಂತಪುರಂ , ಮಂಗಳವಾರ, 19 ಸೆಪ್ಟಂಬರ್ 2017 (10:23 IST)
ತಿರುವನಂತಪುರಂ: ಬಹುಭಾಷಾ ಗಾಯಕ ಕೆಜೆ ಯೇಸುದಾಸ್ ಗೆ ಕೊನೆಗೂ ಪ್ರಸಿದ್ಧ ಹಿಂದೂ ದೇವಾಲಯವಾದ ಅನಂತಪದ್ಮನಾಭ ಕ್ಷೇತ್ರ ಪ್ರವೇಶಿಸಲು ಒಪ್ಪಿಗೆ ಸಿಕ್ಕಿದೆ. ದೇವಾಲಯ ಪ್ರವೇಶಕ್ಕೆ ಒಪ್ಪಿಗೆ ನೀಡುವಂತೆ ಯೇಸುದಾಸ್ ದೇವಾಲಯಗಳ ಟ್ರಸ್ಟ್ ಗೆ ಮನವಿ ಪತ್ರ ಬರೆದಿದ್ದರು.


ಅದಕ್ಕೀಗ ಟ್ರಸ್ಟ್ ಸ್ಪಂದಿಸಿದ್ದು, ದೇವಾಲಯ ಪ್ರವೇಶಿಸಲು ಅನುಮತಿ ನೀಡಿದೆ. ಈ ದೇವಾಲಯದಲ್ಲಿ ಹಿಂದೂಗಳಿಗೆ ಮತ್ತು ಹಿಂದೂ ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡವರಿಗೆ ಮಾತ್ರ ಪ್ರವೇಶ ಎಂಬ ನಿಯಮವಿದೆ. ಆದರೆ ಯೇಸುದಾಸ್ ಮೂಲತಃ ಕ್ರಿಶ್ಚಿಯನ್ ಆಗಿದ್ದರಿಂದ ಪ್ರವೇಶ ಸಾಧ್ಯವಾಗುತ್ತಿರಲಿಲ್ಲ.

ಆದರೆ ಹಲವು ಹಿಂದೂ ಭಕ್ತಿಗೀತೆಗಳಿಗೆ, ಭಜನೆಗಳಿಗೆ ಧ್ವನಿ ನೀಡಿರುವ ಯೇಸುದಾಸ್ ಹಿಂದೂಗಳಂತೆಯೇ ಹಿಂದೂ ಧರ್ಮದ ಆಚರಣೆ ಪಾಲಿಸುತ್ತಾರೆ. ಹೀಗಾಗಿ ತಮಗೆ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಇದೀಗ ಖ್ಯಾತ ಗಾಯಕನ ಮನವಿಗೆ ಮನ್ನಣೆ ಸಿಕ್ಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಪುರುಷರಿಗೆ ಸೆಕ್ಸ್ ಎಂದರೆ ತಮಾಷೆ, ಮಹಿಳೆಯರು ಮಾಡಿದರೆ ಅಪರಾಧ’