Select Your Language

Notifications

webdunia
webdunia
webdunia
webdunia

ಕೊನೆಗೂ ಅನೂಪ್ ಬಂಡಾರಿಗೆ ಓಕೆ ಅಂದ ಕಿಚ್ಚ ಸುದೀಪ್

ಕೊನೆಗೂ ಅನೂಪ್ ಬಂಡಾರಿಗೆ ಓಕೆ ಅಂದ ಕಿಚ್ಚ ಸುದೀಪ್
ಬೆಂಗಳೂರು , ಬುಧವಾರ, 19 ಡಿಸೆಂಬರ್ 2018 (10:18 IST)
ಬೆಂಗಳೂರು: ಅನೂಪ್ ಬಂಡಾರಿ ಕನ್ನಡ ಚಿತ್ರರಂಗದ ಪ್ರತಿಭಾವಂತ ಯುವ ನಿರ್ದೇಶಕರಲ್ಲೊಬ್ಬರು. ಇವರ ರಂಗಿತರಂಗ, ರಾಜರಥ ಸಿನಿಮಾ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ.


ಇದುವರೆಗೆ ಹೊಸಬರನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದ ಅನೂಪ್ ಬಂಡಾರಿಗೆ ಈಗ ಜಾಕ್ ಪಾಟ್ ಹೊಡೆದಿದೆ. ಕೆಲವು ವರ್ಷಗಳ ಹಿಂದೆ ಸುದೀಪ್ ಬಳಿ ನಿಮ್ಮ ಜತೆ ಸಿನಿಮಾ ಮಾಡಬೇಕು ಎಂದು ಅನೂಪ್ ಕನಸು ಹೇಳಿಕೊಂಡಿದ್ದರಂತೆ. ಅದಕ್ಕೆ ಸುದೀಪ್ ಒಳ್ಳೆ ಕತೆ ಇಟ್ಟುಕೊಂಡು ಬನ್ನಿ ಎಂದಿದ್ದರಂತೆ.

ಆ ಕನಸು ಇದೀಗ ನಿಜವಾಗುತ್ತಿದೆ. ಅನೂಪ್ ಬಂಡಾರಿ ಮತ್ತು ಸುದೀಪ್ ನಿರ್ಮಾಣ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇಬ್ಬರೂ ಸೇರಿ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾಳೆ ಪ್ರಕಟಿಸುವುದಾಗಿ ಸ್ವತಃ ಸುದೀಪ್ ಹೇಳಿದ್ದಾರೆ.

ಇನ್ನೊಂದ ಮೂಲಗಳ ಪ್ರಕಾರ ಇದು ಅನೂಪ್ ಹಲವು ವರ್ಷಗಳ ಹಿಂದೆ ರೆಡಿ ಮಾಡಿದ್ದ ಕತೆ. ಅದಕ್ಕೆ ಈಗ ಬಣ್ಣ ಹಚ್ಚಿ ಸುದೀಪ್ ಎದುರು ಇಟ್ಟಿದ್ದಾರೆ. ಇದೊಂದು ಆಕ್ಷನ್, ಅಡ್ವೆಂಚರ್ ಸಿನಿಮಾವಾಗಲಿದೆ. ಒಟ್ಟಾರೆ ಸಂಕ್ರಾಂತಿ ವೇಳೆ ಈ ಚಿತ್ರ ಸೆಟ್ಟೇರುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಪ್ರಿಯಾಗೆ ಬಹಿರಂಗವಾಗಿ ಕಿಚ್ಚ ಸುದೀಪ್ ಹೀಗೆ ಹೇಳಿದ್ದೇಕೆ ಗೊತ್ತಾ?!