Select Your Language

Notifications

webdunia
webdunia
webdunia
webdunia

‘ಬಳೆ’ ಪದ ವಿವಾದ ಮಾಡಿದವರಿಗೆ ಕಿಚ್ಚ ಸುದೀಪ್ ಖಡಕ್ ಪ್ರತಿಕ್ರಿಯೆ

‘ಬಳೆ’ ಪದ ವಿವಾದ ಮಾಡಿದವರಿಗೆ ಕಿಚ್ಚ ಸುದೀಪ್ ಖಡಕ್ ಪ್ರತಿಕ್ರಿಯೆ
ಬೆಂಗಳೂರು , ಸೋಮವಾರ, 23 ಸೆಪ್ಟಂಬರ್ 2019 (09:55 IST)
ಬೆಂಗಳೂರು: ಪೈಲ್ವಾನ್ ಪೈರಸಿ ಮಾಡಿದವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡುವಾಗ ಕೈಗೆ ಬಳೆ ತೊಟ್ಟಿಲ್ಲ ಎಂದಿದ್ದನ್ನೇ ವಿವಾದ ಮಾಡಿದವರ ವಿರುದ್ಧ ಕಿಚ್ಚ ಸುದೀಪ್ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.


ಈ ಬಗ್ಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸುದೀಪ್ ಇದೆಲ್ಲಾ ನನ್ನ ಮಾತನ್ನು ತಿರುಚುವ ಮತ್ತು ಡೈವರ್ಟ್ ಮಾಡುವ ಪ್ರಯತ್ನ. ಏನೇನು ಮಾಡ್ತೀರೋ ಮಾಡಿ. ನಾನು ಎಲ್ಲವನ್ನೂ ಫೇಸ್ ಮಾಡ್ತೀನಿ ಎಂದು ತಿರುಗೇಟು ಕೊಟ್ಟಿದ್ದಾರೆ.

ಅಷ್ಟೇ ಅಲ್ಲದೆ, ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ‘ನನ್ನ ಬಳೆ ಪದವನ್ನೇ ಅಪಾರ್ಥ ಮಾಡಿಕೊಂಡ ಮಹಿಳೆಯರಿಗೆ. ಇದು ನನ್ನ ಹಾಗೂ ನನ್ನ ಸ್ನೇಹಿತರ ಬಗ್ಗೆ ಕಾಮೆಂಟ್ ಮಾಡಿದ ಕೆಲವರಿಗೆ ನನ್ನ ವಿಡಂಬನಾತ್ಮಕ ಪ್ರತಿಕ್ರಿಯೆಯಾಗಿತ್ತು.  ನಾನು ಮಹಿಳೆಯರನ್ನು ಖಂಡಿಸುವ ಅಂತಹ ವರ್ಗಕ್ಕೆ ಸೇರಿದವನಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಜೋಡಿಹಕ್ಕಿ’ ಜಾನಕಿಯ ಬೋಲ್ಡ್ ಫೋಟೋ ಶೂಟ್