Select Your Language

Notifications

webdunia
webdunia
webdunia
webdunia

ಚಪ್ಪಾಳೆ ವಿವಾದಿಂದ ಎಚ್ಚೆತ್ತುಕೊಂಡ ಕಿಚ್ಚ ಸುದೀಪ್

ಚಪ್ಪಾಳೆ ವಿವಾದಿಂದ ಎಚ್ಚೆತ್ತುಕೊಂಡ ಕಿಚ್ಚ ಸುದೀಪ್
ಬೆಂಗಳೂರು , ಮಂಗಳವಾರ, 7 ಏಪ್ರಿಲ್ 2020 (09:30 IST)
ಬೆಂಗಳೂರು: ಪ್ರಧಾನಿ ಮೋದಿ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಲು ಎರಡು ವಾರಗಳ ಹಿಂದೆ ಚಪ್ಪಾಳೆ ತಟ್ಟುವ ಅಭಿಯಾನಕ್ಕೆ ಕರೆಕೊಟ್ಟಾಗ ಕಿಚ್ಚ ಸುದೀಪ್ ಈ ನಿರ್ಧಾರವನ್ನು ಬೆಂಬಲಿಸಿದ್ದರಲ್ಲದೆ, ಆಗಾಗ ಇಂತಹ ಕೆಲಸ ನಡೆಯುತ್ತಿರಬೇಕು ಎಂದಿದ್ದರು.


ಆದರೆ ಕಿಚ್ಚ ಸುದೀಪ್ ಈ ರೀತಿ ಚಪ್ಪಾಳೆ ತಟ್ಟುವುದರಿಂದ ರೋಗ ಗುಣವಾಗುತ್ತದೆ ಎಂದು ಅವೈಜ್ಞಾನಿಕ ಸಿದ್ಧಾಂತವನ್ನು ಬೆಂಬಲಿಸುತ್ತಿದ್ದಾರೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿವಾದದ ಬಳಿಕ ಕಿಚ್ಚ ಸುದೀಪ್ ಎಚ್ಚೆತ್ತುಕೊಂಡಿದ್ದು, ಈ ಬಾರಿ ದೀಪ ಹಚ್ಚುವ ಅಭಿಯಾನದ ವಿಡಿಯೋವನ್ನು ಕೊಂಚ ತಡವಾಗಿಯೇ ಪ್ರಕಟಿಸಿದ್ದಾರೆ.

ಭಾನುವಾರ ರಾತ್ರಿ 9 ಗಂಟೆಗೆ ದೀಪ ಹಚ್ಚಲು ಪ್ರಧಾನಿ ಮೋದಿ ಕರೆ ನೀಡಿದ್ದರು. ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರೂ ತಕ್ಷಣವೇ ವಿಡಿಯೋ ಪ್ರಕಟಿಸಿದ ಕಿಚ್ಚ ನಿನ್ನೆಯಷ್ಟೇ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಎಲ್ಲರೂ ಒಗ್ಗಟ್ಟಾಗಿರೋಣ ಎಂದು ಕರೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದಿನ ಜಗಳ ಮರೆತು ಬುಲೆಟ್ ಪ್ರಕಾಶ್ ಕುಟುಂಬಕ್ಕೆ ಆಸರೆಯಾದ ದರ್ಶನ್