ಚಿತ್ರರಂಗಕ್ಕೆ ಬಂದು 29 ವರ್ಷ: ಕಿಚ್ಚ ಸುದೀಪ್ ಸಂದೇಶದಲ್ಲಿ ಏನಿದೆ ನೋಡಿ

Krishnaveni K
ಶುಕ್ರವಾರ, 31 ಜನವರಿ 2025 (13:59 IST)
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಬಂದು 29 ವರ್ಷವಾದ ಹಿನ್ನಲೆಯಲ್ಲಿ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಸೋಷಿಯಲ್ ಮೀಡಿಯಾ ಮೂಲಕ ವಿಶೇಷ ಸಂದೇಶ ಬರೆದಿದ್ದಾರೆ.

ಕಿಚ್ಚ ಸುದೀಪ್ ಈ ಬಗ್ಗೆ ಟ್ವೀಟ್ ಮಾಡಿದ್ದು ತಮಗೆ ಶುಭಾಶಯ ಹೇಳಿದವರಿಗೆ, ಹಾರೈಸಿದವರಿಗೆ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ. ನನ್ನ ಹೃದಯಾಳದಿಂದ ಧನ್ಯವಾದ ಸಲ್ಲಿಸುವುದಾಗಿ ಹೇಳಿದ್ದಾರೆ.

’29 ವರ್ಷಗಳು.. ನಾನು ನಡೆದ ಹಾದಿ ಬಗ್ಗೆ ನನಗೆ ಕೃತಜ್ಞತೆಯಿದೆ. ಪ್ರೇಕ್ಷಕರನ್ನು ಮನರಂಜಿಸಲು ಸಾಧ್ಯವಾಗಿರುವುದು ಮತ್ತು ಹಲವರ ಜೀವನಕ್ಕೆ ಹತ್ತಿರವಾದ ಕತೆಗಳನ್ನು ಹೇಳಲು ಸಾಧ್ಯವಾಗಿರುವುದು ನನ್ನ ಅದೃಷ್ಟ. ನಿಮ್ಮಿಂದ ನಿರಂತರವಾಗಿ ಸಿಗುತ್ತಿರುವ ಪ್ರೀತಿ ನನಗೆ ಸದಾ ಸ್ಪೂರ್ತಿ ಮತ್ತು ಅಂತಹ ನಿಜವಾದ ಅಭಿಮಾನಿಗಳನ್ನು ಹೊಂದಿರುವುದು ನಿಜಕ್ಕೂ  ನನ್ನ ಭಾಗ್ಯ. ನಿಮ್ಮ ಈ ಪ್ರೋತ್ಸಾಹ ಎಂಥದ್ದೇ ಸವಾಲು ಎದುರಿಸುವ ಧೈರ್ಯ ನನಗೆ ನೀಡಿದೆ. ಇದೆಲ್ಲದಕ್ಕೂ ನಾನು ಒಂದು ಧನ್ಯವಾದ ಎಂದು ಹೃದಯಾಂತರಾಳದಿಂದ ಹೇಳಬಲ್ಲೆ ಅಷ್ಟೆ’ ಎಂದು ಕಿಚ್ಚ ಧನ್ಯವಾದ ಸಲ್ಲಿಸಿದ್ದಾರೆ.

ಸುದೀಪ್ 1997 ರಲ್ಲಿ ತಾಯವ್ವ ಸಿನಿಮಾ ಮೂಲಕ ಪೋಷಕ ಪಾತ್ರಧಾರಿಯಾಗಿ ಎಂಟ್ರಿ ಕೊಟ್ಟಿದ್ದರು. ಆದರೆ ಅವರು ಸೋಲೋ ಹೀರೋ ಆಗಿ ಸಕ್ಸಸ್ ಕಂಡಿದ್ದು 2000 ರಲ್ಲಿ ಬಂದ ಸ್ಪರ್ಶ ಸಿನಿಮಾ ಮೂಲಕ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿಡಿಎಲ್‌ಜಿಗೆ 30 ವರ್ಷ: ಲಂಡನ್‌ನಲ್ಲಿ ಗಮನ ಸೆಳೆದ ಶಾರುಖ್‌, ಕಾಜೋಲ್ ಜೋಡಿ

ಕಾಂತಾರ 2ರ ನಟ ನಟಿಗೆ ಐಎಂಡಿಬಿ ಟಾಪ್ ಪಟ್ಟಿಯಲ್ಲಿ ಸ್ಥಾನ, ಯಾರಿಗೆ ಗೊತ್ತಾ

ನಂದಮೂರಿ ಬಾಲಕೃಷ್ಣ ಅಖಂಡ 2ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆ

ಲಡಾಖಿ ಮದುವೆಯಲ್ಲಿ ಕಂಗನಾ ಸಾಂಪ್ರದಾಯಿ ಲುಕ್‌ಗೆ ಫಿದಾ

ಬಿಡುಗಡೆಯಾದ ಒಂದೇ ತಿಂಗಳಲ್ಲಿ ಒಟಿಟಿಗೆ ಎಂಟ್ರಿಯಾದ ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್‌ಫ್ರೆಂಡ್

ಮುಂದಿನ ಸುದ್ದಿ
Show comments