ಕನ್ನಡ ಸೀರಿಯಲ್ ಪ್ರೇಮಿಗಳಿಗೆ ಶಾಕ್: ಸದ್ಯದಲ್ಲೇ ಈ ಎರಡು ಧಾರವಾಹಿಗಳು ದಿ ಎಂಡ್

Krishnaveni K
ಗುರುವಾರ, 9 ಜನವರಿ 2025 (11:35 IST)
ಬೆಂಗಳೂರು: ಕನ್ನಡ ಧಾರವಾಹಿ ಲೋಕದಲ್ಲಿ ಸದ್ದು ಮಾಡುತ್ತಿರುವ ಎರಡು ಧಾರವಾಹಿಗಳು ಸದ್ಯದಲ್ಲೇ ಮುಕ್ತಾಯ ಕಾಣುವ ಸೂಚನೆ ಕಾಣುತ್ತಿದೆ. ಆ ಎರಡು ಧಾರವಾಹಿಗಳು ಯಾವುದು ನೋಡಿ.

ಅಮೃತಧಾರೆ
ಕನ್ನಡದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದ ಧಾರವಾಹಿ ಅಮೃತಧಾರೆ. ಈ ಧಾರವಾಹಿಯ ಸದ್ಯದ ಕತೆ ನೋಡುತ್ತಿದ್ದರೆ ಸದ್ಯದಲ್ಲೇ ಈ ಧಾರವಾಹಿ ಎಂಡ್ ಆಗುವುದು ಖಚಿತ ಎನ್ನಲಾಗಿದೆ. ಅಮೃತಧಾರೆ ಸೀರಿಯಲ್ ಈಗ ಒಂದು ಹಂತಕ್ಕೆ ಬಂದು ನಿಂತಿದೆ. ನಾಯಕ ಗೌತಮ್ ಧಿವಾನ್ ತಾಯಿ, ತಂಗಿ ಸಿಕ್ಕಾಗಿದೆ. ಇನ್ನೀಗ ವಿಲನ್ ಶಕುಂತಲಾ ಮುಖವಾಡ ಕಳಚಬೇಕಿದೆ. ಅದೂ ಸದ್ಯದಲ್ಲೇ ಆಗಲಿದೆ ಎನ್ನಲಾಗಿದೆ. ಜೀ ಕನ್ನಡದಲ್ಲಿ ಹೊಸ ಧಾರವಾಹಿಗಳು ಬರುತ್ತಿದ್ದು ಅದಕ್ಕೆ ಅಮೃತಧಾರೆ ದಾರಿ ಮಾಡಿಕೊಡಲಿದೆ ಎನ್ನಲಾಗಿದೆ. ಈಗ ಈ ಧಾರವಾಹಿ 495 ಎಪಿಸೋಡ್ ಗಳನ್ನು ಪೂರೈಸಿದೆ.

ಶ್ರೀರಸ್ತು ಶುಭಮಸ್ತು
ಇದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರವಾಹಿ ಕೂಡಾ ಕೊನೆಯ ಹಂತದಲ್ಲಿದೆ. ಹಾಗೆ ನೋಡಿದರೆ ಅಮೃತಧಾರೆ ಧಾರವಾಹಿಗಿಂತಲೂ ಶ್ರೀರಸ್ತು ಶುಭಮಸ್ತು ಬೇಗನ ಮುಗಿಯುವ ಸೂಚನೆಯಿದೆ. ಧಾರವಾಹಿಯಲ್ಲಿ ತುಳಸಿ ಮಕ್ಕಳೆಲ್ಲರೂ ಒಂದಾಗಿದ್ದಾಗಿದೆ. ವಿಲನ್ ಶಾರ್ವರಿ ಮುಖವಾಡ ಕಳಚಲು ದತ್ತ ಪ್ಲ್ಯಾನ್ ಮಾಡಿದ್ದಾಗಿದೆ. ಇತ್ತ ಇನ್ನೊಬ್ಬ ವಿಲನ್ ಆಗಿರುವ ದೀಪಿಕಾಗೂ ಸದ್ಯದಲ್ಲೇ ಬುದ್ಧಿ ಕಲಿಸುವ ಸ್ಕೀಮ್ ಇದೆ. ಹೀಗಾಗಿ ಈ ಧಾರವಾಹಿ ಎಲ್ಲಾ ರೀತಿಯಲ್ಲೂ ಸುಖಾಂತ್ಯ ಕಾಣುವ ಲಕ್ಷಣದಲ್ಲಿದೆ. ಈ ಧಾರವಾಹಿ ಈಗಾಗಲೇ ಎಪಿಸೋಡ್ ಪೂರೈಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ನಿಮಗೆ ಗೌರವ ಬೇಕು ಅಂದ್ರೆ ಬೇರೆಯವರಿಗೂ ಕೊಡೋದನ್ನು ಕಲಿಯಿರಿ: ಅಶ್ವಿನಿಗೆ ಕಿಚ್ಚ ಸುದೀಪ್ ಕ್ಲಾಸ್ video

ವಿಜಯಲಕ್ಷ್ಮಿ ಟೆಂಪಲ್ ರನ್‌, ಇತ್ತ ಡಿ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments