Select Your Language

Notifications

webdunia
webdunia
webdunia
Sunday, 13 April 2025
webdunia

ಮಹಾರಾಷ್ಟ್ರ ಸರಕಾರಕ್ಕೆ ನಟಿ ಕಂಗನಾ ರಣಾವತ್ ಟ್ವಿಟ್ ಟಾಂಗ್

ಮಹಾರಾಷ್ಟ್ರ ಸರಕಾರ
ಮುಂಬೈ , ಶನಿವಾರ, 19 ಸೆಪ್ಟಂಬರ್ 2020 (23:09 IST)
ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೆ ಮಹಾರಾಷ್ಟ್ರ ಸರಕಾರದ ವಿರುದ್ಧ ಟ್ವಿಟ್ ಮಾಡಿದ್ದಾರೆ.

ಬಾಲಿವುಡ್ ನಟ ಕಂಗನಾ ರಣಾವತ್ ಅವರ ಕಚೇರಿಯನ್ನು ಬಿಎಂಸಿ ಕೆಡವಿತ್ತು. ಇದಕ್ಕಾಗಿ  2 ಕೋಟಿ  ರೂ. ಪರಿಹಾರ ಕೋರಿ ನಟಿ ಕಂಗನಾ ಕೇಸ್ ಹಾಕಿದ್ದಾರೆ.

ಇನ್ಸ್ಟಾಗ್ರಾಮ್  ಮೂಲಕ ಮಹಾರಾಷ್ಟ್ರ ಸರ್ಕಾರ ಮತ್ತು ಬಿಎಂಸಿಗೆ ವಿಶೇಷ ಸಂದೇಶವನ್ನು ನಟಿ ಕಂಗನಾ ರವಾನಿಸಿದ್ದಾರೆ.

ಸುಪ್ರೀಂ ಕೋರ್ಟ್ ಪ್ರಕರಣದ ತೀರ್ಪನ್ನು ಹಂಚಿಕೊಂಡಿರುವ ನಟಿ, ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ಆಕ್ಟ್ 1888 ರ ಪ್ರಕಾರ, ಒಬ್ಬ ವ್ಯಕ್ತಿಗೆ 15 ದಿನಗಳ ಮುಂಚೆ ನೋಟಿಸ್ ನೀಡಿದ ಮೇಲೆ ಮಾತ್ರ ಕಟ್ಟಡ ಉರುಳಿಸಬಹುದು ಎಂದು ಕಾಯ್ದೆ ಹೇಳಿದೆ. ಆದರೆ ತಮ್ಮ ಕಚೇರಿ ಕಟ್ಟಡ ಕೆಡವಿದ ವೇಳೆ ನಿಯಮ ಉಲ್ಲಂಘಿಸಲಾಗಿದೆ. ಕಾನೂನು ಬಾಹಿರವಾಗಿ ತಮ್ಮ ಕಚೇರಿಯನ್ನು ಕೆಡವಲಾಗಿದೆ ಎಂದು ದೂರಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಲ್ಲಿ ಚಿಕನ್ ಗಾಗಿ ಹಠ ಹಿಡಿದ ನಟಿ ಸಂಜನಾ?