Webdunia - Bharat's app for daily news and videos

Install App

ಜೈಲಿನಲ್ಲಿ ದರ್ಶನ್ ನೋಡಲು ಸಹಕೈದಿಗಳ ಕುಂಟು ನೆಪ

Krishnaveni K
ಶನಿವಾರ, 29 ಜೂನ್ 2024 (13:40 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ನೋಡಲು ಈಗ ಸಹಕೈದಿಗಳೂ ಕುಂಟು ನೆಪ ಹೇಳುತ್ತಿದ್ದು, ಪೊಲೀಸರಿಗೆ ಇವರನ್ನು ನಿಯಂತ್ರಿಸುವುದೇ ತಲೆನೋವಾಗಿದೆ.

ನಟ ದರ್ಶನ್ ರನ್ನು ಭದ್ರತಾ ಕಾರಣಗಳಿಂದ ಪ್ರತ್ಯೇಕ ಬಾರಕ್ ನಲ್ಲಿರಿಸಲಾಗಿದೆ. ಅವರನ್ನು ಭೇಟಿ ಮಾಡಲು ಯಾವ ಕೈದಿಗಳಿಗೂ ಅವಕಾಶ ನೀಡಲಾಗುತ್ತಿಲ್ಲ. ದರ್ಶನ್ ಕೂಡಾ ಯಾರನ್ನೂ ಮಾತನಾಡಿಸುವ ಮೂಡ್ ನಲ್ಲಿಲ್ಲ. ವಾಕಿಂಗ್ ಮಾಡುವುದು ಕೆಲ ಹೊತ್ತು ಟಿವಿ ನೋಡುವುದು ಬಿಟ್ಟರೆ ದರ್ಶನ್ ಬೇರೆ ಯಾರೊಂದಿಗೂ ಬೆರೆಯುವ ಪ್ರಯತ್ನ ಮಾಡಿಲ್ಲ.

ಆದರೆ ನಟ ದರ್ಶನ್ ಜೈಲಿನಲ್ಲಿರುವ ಕಾರಣಕ್ಕೆ ಸಹ ಕೈದಿಗಳು ಕುತೂಹಲದಿಂದ ಅವರನ್ನು ನೋಡಲು ಆರೋಗ್ಯದ ನೆಪ ಹೇಳಿ ಆಸ್ಪತ್ರೆಗೆ ಬರುತ್ತಿದ್ದಾರಂತೆ. ದರ್ಶನ್ ಇರುವ ಬಾರಕ್ ಜೈಲಿನ ಆಸ್ಪತ್ರೆ ಬಳಿಯೇ ಇದೆ. ಹೀಗಾಗಿ ಆಸ್ಪತ್ರೆಗೆ ಹೋಗುವ ನೆಪದಲ್ಲಿ ದರ್ಶನ್ ರನ್ನು ನೋಡಬಹುದು ಎಂಬುದು ಸಹ ಕೈದಿಗಳ ಯೋಜನೆ.

ಹೀಗಾಗಿ ಆರೋಗ್ಯ ಸಮಸ್ಯೆಯ ನೆಪ ಹೇಳಿಕೊಂಡು ಜೈಲಿನ ಆಸ್ಪತ್ರೆಗೆ ಲಗ್ಗೆಯಿಡುತ್ತಿದ್ದು ಆ ನೆಪದಲ್ಲಿ ದರ್ಶನ್ ನೋಡಲು ಹರಸಾಹಸಪಡುತ್ತಿದ್ದಾರೆ. ಇವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ತಲೆನೋವಾಗಿದೆ ಎನ್ನಲಾಗಿದೆ. ಒಂದೆಡೆ ಹೊರಗೆ ಅಭಿಮಾನಿಗಳ ದಂಡು, ಇನ್ನೊಂದೆಡೆ ಜೈಲಿನೊಳಗೂ ಕೈದಿಗಳಿಂದಲೂ ದರ್ಶನ್ ದರ್ಶನ ಪಡೆಯಲು ಕಾಟ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗಣೇಶ ಹಬ್ಬಕ್ಕೆ ಈ ಬಾರಿಯೂ ಜೈಲಿನಲ್ಲೇ ದಾಸ : ಪತ್ನಿ ವಿಜಯಲಕ್ಷ್ಮಿ ಏನ್ ಮಾಡಿದ್ರೂ ಗೊತ್ತಾ

ಬರ್ತ್ ಡೇಗೆ ಮನೆ ಬಳಿ ಬರಬೇಡಿ ಎಂದಿಲ್ಲ ಕಿಚ್ಚ ಸುದೀಪ್: ಫ್ಯಾನ್ಸ್ ಗೆ ದೊಡ್ಡ ಸರ್ಪ್ರೈಸ್

ಮಡೆನೂರು ಮನು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೆ ಶಿವಣ್ಣ ಏನು ಮಾಡಿದ್ರು ವಿಡಿಯೋ ನೋಡಿ

ಕೆಜಿಎಫ್ ನಟ ದಿನೇಶ್ ಮಂಗಳೂರು ಇನ್ನಿಲ್ಲ

ದರ್ಶನ್‌ ಫ್ಯಾನ್ಸ್‌ಗಳಿಗೆ ಡಬಲ್‌ ಗುಡ್‌ನ್ಯೂಸ್‌: ಮಹತ್ವದ ಸಂದೇಶ ಹಂಚಿಕೊಂಡ ವಿಜಯಲಕ್ಷ್ಮಿ

ಮುಂದಿನ ಸುದ್ದಿ
Show comments