Webdunia - Bharat's app for daily news and videos

Install App

Darshan Thoogudeepa: ಕಿರುತೆರೆಯಲ್ಲಿ ರೇಣುಕಾಸ್ವಾಮಿ, ದರ್ಶನ್ ಪ್ರಕರಣ ಎಪಿಸೋಡ್

Krishnaveni K
ಶನಿವಾರ, 29 ಜೂನ್ 2024 (11:19 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಭಾರೀ ಸುದ್ದಿ ಮಾಡಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಮತ್ತು ನಟ ದರ್ಶನ್ ಅರೆಸ್ಟ್ ಪ್ರಕರಣ ಈಗ ಕಿರುತೆರೆಯಲ್ಲಿ ಪ್ರಸಾರವಾಗಲಿದೆ! ಕಿರುತೆರೆಯ ಶೋ ಒಂದರಲ್ಲಿ ಇದೇ ಕತೆಯನ್ನು ಹೋಲುವ ಎಪಿಸೋಡ್ ಪ್ರಸಾರವಾಗಲಿದೆ.

ದರ್ಶನ್ ಪ್ರಕರಣವನ್ನೇ ಹೋಲುವ ಕತೆಯಿರುವ ಕ್ರೈಂ ಎಪಿಸೋಡ್ ಒಂದನ್ನು ಪ್ರಸಾರ ಮಾಡಲು ಕಲರ್ಸ್ ಕನ್ನಡ ವಾಹಿನಿ ಸಜ್ಜಾಗಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಶಾಂತಂ ಪಾಪಂ ಎಂಬ ಕ್ರೈಂ ಸೀರೀಸ್ ನಲ್ಲಿ ದರ್ಶನ್ ಪ್ರಕರಣವನ್ನೇ ಹೋಲುವ ಕತೆಯನ್ನು ಹೇಳಲಾಗುತ್ತಿದೆ.

ಈ ಸೀರೀಸ್ ರಾತ್ರಿ 10.30 ಕ್ಕೆ ಪ್ರಸಾರವಾಗುತ್ತದೆ. ಈ ಸೀರೀಸ್ ನ ಒಂದು ಎಪಿಸೋಡ್ ನ ಪ್ರೋಮೋ ಈಗ ಹರಿಯಬಿಡಲಾಗಿದೆ. ಇದನ್ನು ನೋಡಿದರೆ ಇದು ದರ್ಶನ್ ಪ್ರಕರಣವೆಂದೇ ಅನುಮಾನ ಮೂಡಿಸುತ್ತಿದೆ. ನಿನ್ನ ಟೈಂ ಚೆನ್ನಾಗಿದ್ದಾಗ ತಗ್ಗಿ ಬಗ್ಗಿ ನಡೆಯಬೇಕಿತ್ತು. ಆಗ ಈವತ್ತು ತಲೆ ತಗ್ಗಿಸಿ ನಡೆಯುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ನಾಯಕನಿಗೆ ಪೊಲೀಸ್ ಹೇಳುವ ಸನ್ನಿವೇಶವಿದೆ. ಇನ್ನೊಂದು ಕಡೆ ವಾಸು ಮತ್ತು ಅಕ್ಕ ಚೆನ್ನಾಗಿಯೇ ಇದ್ದರು, ಆ ನಟಿ ಬಂದ ಮೇಲೆ ಎಲ್ಲಾ ಹಾಳಾಯಿತು ಎಂದು ಹೇಳಲಾಗುತ್ತದೆ.

ಇದನ್ನು ನೋಡಿದರೆ ಇದು ದರ್ಶನ್ ಜೀವನ ಕತೆಯೇ ಎನ್ನಲಾಗಿದೆ. ಈ ಎಪಿಸೋಡ್ ಗೆ ಡೇರ್ ಡೆವಿಲ್ ದೇವದಾಸ್ ಎಂದು ಹೆಸರಿಡಲಾಗಿದೆ. ಈ ಎಪಿಸೋಡ್ ಖಂಡಿತಾ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಬಹುದು. ಇಂತಹದ್ದೊಂದು ಪ್ರಯೋಗ ಮಾಡುವ ಧೈರ್ಯ ಮಾಡಿದ ವಾಹಿನಿಯನ್ನು ಮೆಚ್ಚಲೇಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮದುವೆಯಾಗಿ ಇಷ್ಟು ದಿನಕ್ಕೆ ನಟಿ ರಶ್ಮಿ ಪ್ರಭಾಕರ್ ಕೊನೆಗೂ ಕೊಟ್ರು ಗುಡ್ ನ್ಯೂಸ್

ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ ಬೀಸಿದ ಸುಮಲತಾಗೆ ಮೊದಲು ಕನ್ನಡ ಕಲಿಯಿರಿ ಎಂದ ನೆಟ್ಟಿಗರು

Kamal Haasan: ಕನ್ನಡಕ್ಕೆ ಅವಮಾನ ಮಾಡಿದ ಕಮಲ್ ಹಾಸನ್ ಸಿನಿಮಾಗೆ ತಕ್ಕ ಶಾಸ್ತಿ

Keerthi Vishnuvardhan: ವಿಷ್ಣುವರ್ಧನ್ ಪುತ್ರಿ ಕೀರ್ತಿ ನಿಜಕ್ಕೂ ಯಾರ ಮಗಳು, ಯಾರಿಂದ ದತ್ತು ಪಡೆದಿದ್ದರು

ವಿಮಾನದಲ್ಲಿ ನೆಚ್ಚಿನ ನಟ ಹರ್ಷವರ್ಧನ್‌ರನ್ನು ನೋಡುತ್ತಿದ್ದ ಹಾಗೇ ಮಹಿಳಾ ಅಭಿಮಾನಿ ಹೀಗೇ ಮಾಡೋದಾ, Viral Video

ಮುಂದಿನ ಸುದ್ದಿ
Show comments