Select Your Language

Notifications

webdunia
webdunia
webdunia
webdunia

ಜೈಲಿನಲ್ಲಿ ದರ್ಶನ್ ನೋಡಲು ಸಹಕೈದಿಗಳ ಕುಂಟು ನೆಪ

Darshan

Krishnaveni K

ಬೆಂಗಳೂರು , ಶನಿವಾರ, 29 ಜೂನ್ 2024 (13:40 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ನೋಡಲು ಈಗ ಸಹಕೈದಿಗಳೂ ಕುಂಟು ನೆಪ ಹೇಳುತ್ತಿದ್ದು, ಪೊಲೀಸರಿಗೆ ಇವರನ್ನು ನಿಯಂತ್ರಿಸುವುದೇ ತಲೆನೋವಾಗಿದೆ.

ನಟ ದರ್ಶನ್ ರನ್ನು ಭದ್ರತಾ ಕಾರಣಗಳಿಂದ ಪ್ರತ್ಯೇಕ ಬಾರಕ್ ನಲ್ಲಿರಿಸಲಾಗಿದೆ. ಅವರನ್ನು ಭೇಟಿ ಮಾಡಲು ಯಾವ ಕೈದಿಗಳಿಗೂ ಅವಕಾಶ ನೀಡಲಾಗುತ್ತಿಲ್ಲ. ದರ್ಶನ್ ಕೂಡಾ ಯಾರನ್ನೂ ಮಾತನಾಡಿಸುವ ಮೂಡ್ ನಲ್ಲಿಲ್ಲ. ವಾಕಿಂಗ್ ಮಾಡುವುದು ಕೆಲ ಹೊತ್ತು ಟಿವಿ ನೋಡುವುದು ಬಿಟ್ಟರೆ ದರ್ಶನ್ ಬೇರೆ ಯಾರೊಂದಿಗೂ ಬೆರೆಯುವ ಪ್ರಯತ್ನ ಮಾಡಿಲ್ಲ.

ಆದರೆ ನಟ ದರ್ಶನ್ ಜೈಲಿನಲ್ಲಿರುವ ಕಾರಣಕ್ಕೆ ಸಹ ಕೈದಿಗಳು ಕುತೂಹಲದಿಂದ ಅವರನ್ನು ನೋಡಲು ಆರೋಗ್ಯದ ನೆಪ ಹೇಳಿ ಆಸ್ಪತ್ರೆಗೆ ಬರುತ್ತಿದ್ದಾರಂತೆ. ದರ್ಶನ್ ಇರುವ ಬಾರಕ್ ಜೈಲಿನ ಆಸ್ಪತ್ರೆ ಬಳಿಯೇ ಇದೆ. ಹೀಗಾಗಿ ಆಸ್ಪತ್ರೆಗೆ ಹೋಗುವ ನೆಪದಲ್ಲಿ ದರ್ಶನ್ ರನ್ನು ನೋಡಬಹುದು ಎಂಬುದು ಸಹ ಕೈದಿಗಳ ಯೋಜನೆ.

ಹೀಗಾಗಿ ಆರೋಗ್ಯ ಸಮಸ್ಯೆಯ ನೆಪ ಹೇಳಿಕೊಂಡು ಜೈಲಿನ ಆಸ್ಪತ್ರೆಗೆ ಲಗ್ಗೆಯಿಡುತ್ತಿದ್ದು ಆ ನೆಪದಲ್ಲಿ ದರ್ಶನ್ ನೋಡಲು ಹರಸಾಹಸಪಡುತ್ತಿದ್ದಾರೆ. ಇವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ತಲೆನೋವಾಗಿದೆ ಎನ್ನಲಾಗಿದೆ. ಒಂದೆಡೆ ಹೊರಗೆ ಅಭಿಮಾನಿಗಳ ದಂಡು, ಇನ್ನೊಂದೆಡೆ ಜೈಲಿನೊಳಗೂ ಕೈದಿಗಳಿಂದಲೂ ದರ್ಶನ್ ದರ್ಶನ ಪಡೆಯಲು ಕಾಟ.

Share this Story:

Follow Webdunia kannada

ಮುಂದಿನ ಸುದ್ದಿ

Darshan Thoogudeepa: ಕಿರುತೆರೆಯಲ್ಲಿ ರೇಣುಕಾಸ್ವಾಮಿ, ದರ್ಶನ್ ಪ್ರಕರಣ ಎಪಿಸೋಡ್