Select Your Language

Notifications

webdunia
webdunia
webdunia
webdunia

ಅನಾರೋಗ್ಯದ ನಡುವೆಯೂ ಕಾವೇರಿ ವಿವಾದದ ಬಗ್ಗೆ ಮಾತನಾಡಿದ ಜಗ್ಗೇಶ್

ಅನಾರೋಗ್ಯದ ನಡುವೆಯೂ ಕಾವೇರಿ ವಿವಾದದ ಬಗ್ಗೆ ಮಾತನಾಡಿದ ಜಗ್ಗೇಶ್
ಬೆಂಗಳೂರು , ಭಾನುವಾರ, 1 ಅಕ್ಟೋಬರ್ 2023 (09:30 IST)
Photo Courtesy: Twitter
ಬೆಂಗಳೂರು: ಇತ್ತೀಚೆಗೆ ಬೆನ್ನು ನೋವಿಗೊಳಗಾಗಿ ದೆಹಲಿಯಲ್ಲಿ ಚಿಕಿತ್ಸೆ ಪಡೆದಿದ್ದ ನವರಸನಾಯಕ ಜಗ್ಗೇಶ್ ಕಾವೇರಿ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ.

ಆದರೆ ಇದೀಗ ತಮ್ಮ ಮನೆಗೆ ಬಂದ ಮೇಲೆ ಅನಾರೋಗ್ಯದ ನಡುವೆಯೂ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಅನಾರೋಗ್ಯದ ವಿಚಾರ, ಕಾವೇರಿ ವಿವಾದದ ಬಗ್ಗೆ ಮಾತನಾಡಿದ್ದಾರೆ.

ಕಾವೇರಿ ವಿವಾದದ ವಿಚಾರದಲ್ಲಿ ಕನ್ನಡ ನಟರು ಪಾಲ್ಗೊಳ್ಳುತ್ತಿಲ್ಲ ಎಂದು ಆರೋಪ ಹೊರಿಸುವವರ ಬಗ್ಗೆ ಜಗ್ಗೇಶ್ ಕಿಡಿ ಕಾರಿದ್ದಾರೆ. ಬೆಂಗಳೂರಿನಲ್ಲಿ ಎಷ್ಟು ಜನ ಕಾವೇರಿ ನೀರು ಕುಡಿಯುತ್ತಾರೆ? ಅವರಲ್ಲಿ ಎಷ್ಟು ಜನ ಹೋರಾಟಕ್ಕೆ ಬಂದಿದ್ದಾರೆ? ಕೇವಲ ಕಲಾವಿದರನ್ನು ಮಾತ್ರ ಪ್ರಶ್ನೆ ಮಾಡಲಾಗುತ್ತದೆ. ಎಷ್ಟೋ ಜನ ಇಲ್ಲಿನ ಕಲಾವಿದರು ಕಷ್ಟದಲ್ಲಿದ್ದಾರೆ. ಆದರೆ ಬೇರೆ ಭಾಷೆಯ ನಟರು ಇಲ್ಲಿ ಬಂದು ಕೋಟಿ ಕೋಟಿ ಬಾಚಿಕೊಂಡು ಹೋಗುತ್ತಾರೆ. ಪರಭಾಷೆ ಸಿನಿಮಾಗಳನ್ನು ನೋಡುವವರ ಮುಖಕ್ಕೆ ಉಗಿಯಬೇಕು’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿನಲ್ಲೂ ಕನ್ನಡ ಸಿನಿಮಾಗಳಿಗೆ ತಡೆ ಬೆದರಿಕೆ