Select Your Language

Notifications

webdunia
webdunia
webdunia
webdunia

ಕನ್ನಡ ಕಾರ್ಯಕ್ರಮಕ್ಕೆ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಯಾಕೆ? ಜಗ್ಗೇಶ್ ಬೇಸರ

ಕನ್ನಡ ಕಾರ್ಯಕ್ರಮಕ್ಕೆ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಯಾಕೆ? ಜಗ್ಗೇಶ್ ಬೇಸರ
ಬೆಂಗಳೂರು , ಸೋಮವಾರ, 11 ನವೆಂಬರ್ 2019 (09:50 IST)
ಬೆಂಗಳೂರು: ಕನ್ನಡ ಶಾಲೆಯೊಂದರ ಕಾರ್ಯಕ್ರಮಕ್ಕೆ ಮಲಯಾಳಿ ಮೂಲದ ನಟಿ, ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಅವರನ್ನು ಕರೆಸಿದ್ದಕ್ಕೆ ನಟ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.


ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಜಗ್ಗೇಶ್ ಕೂಡಾ ಭಾಗವಹಿಸಿದ್ದರು. ಆದರೆ ಕಾರ್ಯಕ್ರಮದ ಬಳಿಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾ ವಾರಿಯರ್ ರನ್ನು ಆಹ್ವಾನಿಸಿದ ನಿರ್ಮಾಪಕ ಕೆ ಮಂಜು ವಿರುದ್ಧ ಜಗ್ಗೇಶ್ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಿಯಾ ವಾರಿಯರ್ ಕೆ ಮಂಜು ನಿರ್ಮಾಣದ ಸಿನಿಮಾವೊಂದರ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಬರುತ್ತಿದ್ದಾರೆ. ಇದೇ ಆತ್ಮೀಯತೆಯಿಂದ ಈ ಕಾರ್ಯಕ್ರಮಕ್ಕೆ ಪ್ರಿಯಾರನ್ನು ಆಹ್ವಾನಿಸಲಾಗಿತ್ತು. ಆದರೆ ಕನ್ನಡದಲ್ಲಿ ಇಷ್ಟೊಂದು ಜನಪ್ರಿಯ, ಪ್ರತಿಭಾವಂತ ನಟಿಯರಿರುವಾಗ ಮಲಯಾಳಿ ನಟಿಯನ್ನು ಕರೆಸಿದ್ದು ಜಗ್ಗೇಶ್ ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ತಮ್ಮ ಇನ್ ಸ್ಟಾಗ್ರಾಂನಲ್ಲಿ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ದಿನವೇ ಚೈತ್ರಾ ಕೋಟೂರುಗೆ ಗೇಟ್ ಪಾಸ್ ನೀಡಿದ ಬಿಗ್ ಬಾಸ್