Select Your Language

Notifications

webdunia
webdunia
webdunia
webdunia

ಹಾಸ್ಯ ಚಕ್ರವರ್ತಿ ನರಸಿಂಹರಾಜು ಸ್ಮಾರಕ ನಿರ್ಮಾಣಕ್ಕೆ ಜಗ್ಗೇಶ್ ಒತ್ತಾಸೆ

ಹಾಸ್ಯ ಚಕ್ರವರ್ತಿ ನರಸಿಂಹರಾಜು ಸ್ಮಾರಕ ನಿರ್ಮಾಣಕ್ಕೆ ಜಗ್ಗೇಶ್ ಒತ್ತಾಸೆ
ಬೆಂಗಳೂರು , ಗುರುವಾರ, 30 ಜನವರಿ 2020 (10:31 IST)
ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅಪರೂಪದ ಹಾಸ್ಯ ನಟ, ಹಾಸ್ಯ ಚಕ್ರವರ್ತಿ ಎಂದೇ ಕರೆಯಿಸಿಕೊಳ್ಳುವ ನರಸಿಂಹ ರಾಜು ಅವರಿಗೆ ಸರ್ಕಾರದ ವತಿಯಿಂದ ಸ್ಮಾರಕ ನಿರ್ಮಾಣ ಮಾಡಲು ನವರಸನಾಯಕ ಜಗ್ಗೇಶ್ ಒತ್ತಾಸೆಯಾಗಿ ನಿಂತಿದ್ದಾರೆ.


ಹಾಸ್ಯ ಚಕ್ರವರ್ತಿಗೆ ಸ್ಮಾರಕ ನಿರ್ಮಿಸಿಕೊಡುವುದಾಗಿ ಅವರ ಪತ್ನಿ ಬಳಿ ಜಗ್ಗೇಶ್ ಭರವಸೆ ನೀಡಿದ್ದರು. ಅದರಂತೆ ಶಾಸಕ ನಾಗೇಶ್ ಜತೆಗೂಡಿ ತಿಪಟೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲು ತಯಾರಿ ನಡೆಸಿದ್ದಾರಂತೆ. ಅದರ ಸಂಪೂರ್ಣ ವಿವರಣೆಯನ್ನು ನರಸಿಂಹ ರಾಜು ಪತ್ನಿಗೆ ನೀಡಿದ್ದೇನೆ ಎಂದಿದ್ದಾರೆ ಜಗ್ಗೇಶ್.

ಅದರಂತೆ ಸದ್ಯದಲ್ಲೇ ನರಸಿಂಹ ರಾಜುಗೆ ಸ್ಮಾರಕ ನಿರ್ಮಾಣವಾಗಲಿದೆ. ನಗಿಸಿದ ದೇವರಿಗೆ ಖಂಡಿತಾ ಸ್ಮಾರಕ ನಿರ್ಮಾಣವಾಗುತ್ತದೆ ಎಂದು ಜಗ್ಗೇಶ್ ಭರವಸೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರಾಖಂಡದ ಕಾನನದಲ್ಲಿ ದರ್ಶನ್ ಸಂಚಾರ