Select Your Language

Notifications

webdunia
webdunia
webdunia
webdunia

ಕಾಲು ಮುರಿದುಕೊಂಡ ನವರಸನಾಯಕ ಜಗ್ಗೇಶ್: ಇನ್ನು ಆರು ವಾರ ಅಲ್ಲಾಡೋ ಹಾಗಿಲ್ಲ!

ಕಾಲು ಮುರಿದುಕೊಂಡ ನವರಸನಾಯಕ ಜಗ್ಗೇಶ್: ಇನ್ನು ಆರು ವಾರ ಅಲ್ಲಾಡೋ ಹಾಗಿಲ್ಲ!
ಬೆಂಗಳೂರು , ಶನಿವಾರ, 17 ಜೂನ್ 2023 (17:23 IST)
Photo Courtesy: Twitter
ಬೆಂಗಳೂರು: ನವರಸನಾಯಕ ಜಗ್ಗೇಶ್ ಕಾಲಿಗೆ ಪೆಟ್ಟಾಗಿದ್ದು, ಇನ್ನು ಆರು ವಾರ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಈ ವಿಚಾರವನ್ನು ಖುದ್ದು ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ನಡೆಯುವಾಗ ಸಣ್ಣ ಅಚಾತುರ್ಯವಾಗಿದ್ದು ಪಾದದ ಮೂಳೆ ಮುರಿತವಾಗಿದೆ. ಇನ್ನು ಆರು ವಾರಗಳ ಕಾಲ ನಡಿಗೆಗೆ ದಿಗ್ಬಂಧನ ಎಂದು ಜಗ್ಗೇಶ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಸಹೋದರಿ ಮನೆಗೆಂದು ಅಮೆರಿಕಾಗೆ ತೆರಳಿದ್ದ ಜಗ್ಗೇಶ್ ಈಗಷ್ಟೇ ಭಾರತಕ್ಕೆ ಮರಳಿದ್ದರು. ಇದೀಗ ಇಂತಹದ್ದೊಂದು ಅಚಾತುರ್ಯ ಮಾಡಿಕೊಂಡಿದ್ದಾರೆ. ಬೇಗನೇ ಚೇತರಿಸಿಕೊಳ್ಳುವಂತೆ ಫ್ಯಾನ್ಸ್ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಟಿಟಿಗೆ ಬಂದ ಡೇರ್ ಡೆವಿಲ್ಸ್ ಮುಸ್ತಫಾ