Select Your Language

Notifications

webdunia
webdunia
webdunia
webdunia

ಮಂಡ್ಯದಲ್ಲಿ ಇಂದು ಅಭಿಷೇಕ್-ಅವಿವಾ ಬೀಗರ ಊಟ: ತಪ್ಪದೇ ಬನ್ನಿ ಎಂದ ಸುಮಲತಾ

ಮಂಡ್ಯದಲ್ಲಿ ಇಂದು ಅಭಿಷೇಕ್-ಅವಿವಾ ಬೀಗರ ಊಟ: ತಪ್ಪದೇ ಬನ್ನಿ ಎಂದ ಸುಮಲತಾ
ಮಂಡ್ಯ , ಶುಕ್ರವಾರ, 16 ಜೂನ್ 2023 (08:10 IST)
ಮಂಡ್ಯ: ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಮದುವೆ ಬೀಗರ ಔತಣ ಕೂಟ ಇಂದು ಮಂಡ್ಯದಲ್ಲಿ ಏರ್ಪಡಿಸಲಾಗಿದೆ.

ಅಭಿಮಾನಿಗಳಿಗಾಗಿಯೇ ಮಂಡ್ಯದಲ್ಲಿ ಈ ಔತಣ ಕೂಟ ಏರ್ಪಡಿಸಲಾಗಿದೆ. ಮಂಡ್ಯದಲ್ಲಿ ಅಂಬಿ ಕುಟುಂಬಕ್ಕೆ ಈಗಲೂ ನಂಟಿದೆ. ಇಲ್ಲಿನ ಜನರ ಪ್ರೀತಿ ಆ ಕುಟುಂಬದ ಮೇಲಿದೆ. ಹೀಗಾಗಿ ಅಂಬಿ ತವರಿನಲ್ಲಿ ಔತಣ ಕೂಟ ಏರ್ಪಡಿಸಲಾಗಿದೆ.

ಈ ಬಗ್ಗೆ ಸುಮಲತಾ ಅಂಬರೀಶ್ ಸೋಷಿಯಲ್ ಮೀಡಿಯಾ ಮೂಲಕ ಆಹ್ವಾನ ನೀಡಿದ್ದಾರೆ. ಬೆಳಿಗ್ಗೆ 11.30 ರಿಂದ ಬೀಗರ ಔತಣ ಕೂಟವಿದ್ದು, ಮಂಡ್ಯದ ಗೆಜ್ಜಲಗೆರೆಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದನ್ನು ವೈಯಕ್ತಿಕ ಆಹ್ವಾನವೆಂದು ಪರಿಗಣಿಸಿ ಎಲ್ಲರೂ ಕುಟುಂಬ ಸಮೇತರಾಗಿ ಬರಬೇಕೆಂದು ಸುಮಲತಾ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಕಾರು ಖರೀದಿಸಿದ ರಾಕಿಂಗ್ ಸ್ಟಾರ್ ಯಶ್: ಇದರ ಬೆಲೆ ಎಷ್ಟು ಗೊತ್ತಾ?