Select Your Language

Notifications

webdunia
webdunia
webdunia
webdunia

ಸ್ವಪ್ರತಿಷ್ಠೆ ನಟರಿಂದ ವಾರಸುದಾರಿಕೆಯ ಕೆಟ್ಟ ಚಿಂತೆ: ಮತ್ತೆ ಜಗ್ಗೇಶ್ ವಾಗ್ದಾಳಿ

ಸ್ವಪ್ರತಿಷ್ಠೆ ನಟರಿಂದ ವಾರಸುದಾರಿಕೆಯ ಕೆಟ್ಟ ಚಿಂತೆ: ಮತ್ತೆ ಜಗ್ಗೇಶ್ ವಾಗ್ದಾಳಿ
ಬೆಂಗಳೂರು , ಶನಿವಾರ, 28 ನವೆಂಬರ್ 2020 (09:30 IST)
ಬೆಂಗಳೂರು: ಪ್ಯಾನ್ ಇಂಡಿಯಾ ಸಿನಿಮಾ ಮಾಡುವವರ ವಿರುದ್ಧ ಹೇಳಿಕೆ ನೀಡಿ ರಾಕಿಂಗ್  ಸ್ಟಾರ್ ಯಶ್ ಸೇರಿದಂತೆ ಕೆಲವು ಸ್ಟಾರ್ ನಟರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನವರಸನಾಯಕ ಜಗ್ಗೇಶ‍್ ಈಗ ಮತ್ತೊಂದು ಹೇಳಿಕೆ ನೀಡಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಕೇಳಿಬರುತ್ತಿರುವ ಟೀಕೆಗಳ ಬಗ್ಗೆ ಒಂದೇ ಮಾತಿನಲ್ಲಿ ಪ್ರತಿಕ್ರಿಯೆ ನೀಡಿ ಮುಗಿಸುವೆ ಎಂದಿರುವ ಜಗ್ಗೇಶ್ ‘ಇಂದಿನ ಕೆಲ ಸ್ವಪ್ರತಿಷ್ಠೆ ನಟರಿಗೆ ನಮ್ಮಂಥ ಸೀನಿಯಾರಿಟಿ ನಟರು ತೊಡಕಾಗಿದ್ದೇವೆ. ನಾವು ಹೋದರೆ ಅಥವಾ ಸತ್ತರೆ ತಾವು ವಾರಸುದಾರರು ಎಂಬ ಕೆಟ್ಟ ಚಿಂತೆ ಇದೆ. ಕೆಲ ನಟರ ಅಡಿಯೋ ಸಂಭಾಷಣೆಯನ್ನು ಕೇಳಿಸಿದ್ದಾರೆ. ಹೀಗಿರಬೇಕಾದರೆ ಇಂದಿನ ಚಿಂತೆ. ಎಲ್ಲವನ್ನೂ ರಾಯರಿಗೆ ಒಪ್ಪಿಸಿ ಇರುವಷ್ಟು ದಿನ ದುಡಿಯುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನಿರೀಕ್ಷಿತ ಅಚ್ಚರಿ ಕೊಟ್ಟ ಯುವರತ್ನ ಚಿತ್ರತಂಡ: ಪುನೀತ್ ಡ್ಯಾನ್ಸ್ ಗೆ ಫ್ಯಾನ್ಸ್ ಫಿದಾ