Select Your Language

Notifications

webdunia
webdunia
webdunia
Saturday, 12 April 2025
webdunia

ಇನ್ನು ಎಲ್ಲರ ಜೊತೆಗೆ ಮಾತು ಬಂದ್! ಹೀಗ್ಯಾಕೆ ಹೇಳಿದ್ರು ಜಗ್ಗೇಶ್?

ದರ್ಶನ್
ಬೆಂಗಳೂರು , ಶನಿವಾರ, 13 ಫೆಬ್ರವರಿ 2021 (09:47 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಅವಮಾನ ಮಾಡಿದರು ಎಂಬ ವಿವಾದ ಸೃಷ್ಟಿಯಾಗುತ್ತಿದ್ದಂತೇ ಬೇಸರಗೊಂಡಿರುವ ನವರಸನಾಯಕ ಜಗ್ಗೇಶ್ ಇನ್ಮುಂದೆ ಯಾರ ಜೊತೆಗೂ ಮಾತಾಡಲ್ಲ ಎಂದಿದ್ದಾರೆ.


ದರ್ಶನ್ ಅಭಿಮಾನಿಗಳ ಬಗ್ಗೆ ಕೀಳಾಗಿ ಮಾತನಾಡುವ ಅಡಿಯೋ ತುಣುಕೊಂದು ಮೊನ್ನೆ ವೈರಲ್ ಆಗಿತ್ತು. ಇದು ಜಗ್ಗೇಶ್ ಗೆ ತೀರಾ ಬೇಸರ ತಂದಿದೆಯಂತೆ. ‘ಇದುವರೆಗೆ 0.1% ಜನರ ಜೊತೆ ಮಾತನಾಡುತ್ತಿದ್ದೆ. ಇನ್ಮುಂದೆ ಅದೂ ಬಂದ್. ಪ್ರೀತಿಸಲು ಜನರಿದ್ದಾರೆ. ಕೆಲಸ ಮಾಡಲು ಉದ್ಯಮವಿದೆ. 4 ತಲೆಮಾರು ತಿನ್ನಲು ಅನ್ನವಿದೆ. ಕಂಡೋರ ಕಾಲು ಎಳೆದು ಮೇಲೆ ಬರಬೇಕು ಅನ್ನುವವರು ಕಾಲು ಕೆಳಗೆ ಇರುತ್ತಾರೆ. ವಿನಹ ಸಣ್ಣ ಸಾಧನೆಯು ಮಾಡಲಾಗದು. ನಮ್ಮ ಮನಸ್ಸಿನಂತೆ ನಮ್ಮ ಜೀವನ’ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಗರು ಅಡಿಯೋ ಲಾಂಚ್ ಗೆ ಮಾಜಿ ಸಿಎಂ ಸಿದ್ಧರಾಮಯ್ಯ