Select Your Language

Notifications

webdunia
webdunia
webdunia
webdunia

ಕಾಮಿಡಿ ಕಿಲಾಡಿಗಳು ನಯನಾ ಕನ್ನಡ ವಿವಾದ: ನೆರವಿಗೆ ಬಂದ ಜಗ್ಗೇಶ್

ಕಾಮಿಡಿ ಕಿಲಾಡಿಗಳು ನಯನಾ ಕನ್ನಡ ವಿವಾದ: ನೆರವಿಗೆ ಬಂದ ಜಗ್ಗೇಶ್
ಬೆಂಗಳೂರು , ಶನಿವಾರ, 11 ಜುಲೈ 2020 (09:40 IST)
ಬೆಂಗಳೂರು: ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಖ್ಯಾತಿಗೆ ಬಂದ ನಯನಾ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಕಾಮೆಂಟ್ ಒಂದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ನಯನಾ ಪರವಾಗಿ ಜಗ್ಗೇಶ್ ಮಾತನಾಡಿದ್ದಾರೆ.


ನಯನಾ ತಮ್ಮ ಪೋಸ್ಟ್ ಒಂದರಲ್ಲಿ ಇಂಗ್ಲಿಷ್ ನಲ್ಲಿ ಅಡಿಬರಹ ಬರೆದಿದ್ದರು. ಇದನ್ನು ನೋಡಿ ನೆಟ್ಟಿಗರೊಬ್ಬರು ನಿಮಗೆ ಬೆಳೆಯುವವರೆಗೆ ಕನ್ನಡ ಬೇಕು. ಆಮೇಲೆ ಯಾಕೆ ಇಂಗ್ಲಿಷ್ ಬಳಸುತ್ತೀರಿ ಎಂದು ಕೇಳಿದ್ದ. ಇದಕ್ಕೆ ನಯನಾ ಖಾರವಾಗಿ ‘ಅಪ್ಪಾ.. ಕನ್ನಡದ ಭಕ್ತ ಮುಚ್ಕೊಂಡು ಹೋಗಪ್ಪಾ’ ಎಂದು ಕಾಮೆಂಟ್ ಮಾಡಿದ್ದರು.

ಕನ್ನಡದ ಬಗ್ಗೆ ಕೇಳಿದ್ದಕ್ಕೆ ಈ ಮಟ್ಟಿಗೆ ಕಾಮೆಂಟ್ ಮಾಡಬೇಕಾಗಿರಲಿಲ್ಲ ಎಂದು ಹಲವರು ಆಕ್ಷೇಪಿಸಿದ್ದರು. ಈ ವಿವಾದದ ಬಗ್ಗೆ ಮಾತನಾಡಿರುವ ಜಗ್ಗೇಶ್ ‘ಈಕೆ ಇನ್ನೂ ಸೊಸೆ, ಅನುಭವದ ಅತ್ತೆ ಆಗಲು ಸಮಯ ಬೇಕು. ನಮ್ಮ ಕಾಲದಲ್ಲಿ  ದಿನ ಹಾಗೂ ವಾರದ ಪತ್ರಿಕೆಯಲ್ಲಿ ಪ್ರತಿಕ್ರಿಯೆ ಬರುತ್ತಿತ್ತು. ಇಂದು ಅಂಗೈಯಲ್ಲೇ ಅಭಿಪ್ರಾಯ ಕುಟ್ಟುವ ಕೋಟ್ಯಂತರ ಪತ್ರಕರ್ತರಿದ್ದಾರೆ. ಹಾಗಾಗಿ ಎಚ್ಚರವಾಗಿ ಉತ್ತರಿಸಬೇಕು. ಇಲ್ಲದಿದ್ದರೆ ಗಮನಿಸದೆ ಮುಂದೆ ಹೋಗಬೇಕು. ಅನ್ಯರಿಗೆ ಉತ್ತರಿಸಿ ಕೂತರೆ ನಮ್ಮ ಗುರಿ ಶೂನ್ಯ. ಸಮಯ ವ್ಯರ್ಥ’ ಎಂದು ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿಯ ‘ಲಾ’ ಪಾಯಿಂಟ್ ಕುತೂಹಲ ಹುಟ್ಟಿಸುವಂತಿದೆ!