Select Your Language

Notifications

webdunia
webdunia
webdunia
webdunia

ದರ್ಶನ್‌ ಇರುವ ಬಳ್ಳಾರಿನ ಜೈಲಿನ ಹೊರಭಾಗಕ್ಕೆ ಸಿಸಿಟಿವಿ ಅಳವಡಿಗೆ

ದರ್ಶನ್‌ ಇರುವ ಬಳ್ಳಾರಿನ ಜೈಲಿನ ಹೊರಭಾಗಕ್ಕೆ ಸಿಸಿಟಿವಿ ಅಳವಡಿಗೆ

Sampriya

ಬಳ್ಳಾರಿ , ಮಂಗಳವಾರ, 3 ಸೆಪ್ಟಂಬರ್ 2024 (19:29 IST)
ಬಳ್ಳಾರಿ: ನಟ ದರ್ಶನ್ ಅವರು ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುತ್ತಿದ್ದ ಹಾಗೇ ಜೈಲಿನ ಸುತ್ತಾ ಮುತ್ತಾ ಹೈ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ.

ಪರಪ್ಪನ ಅಗ್ರಹಾರದಲ್ಲಿ ನಿಯಮ ಉಲ್ಲಂಘಿಸಿ ಕೈದಿ ವಿಲ್ಸನ್ ಗಾರ್ಡನ್ ಆಯೋಜಿಸಿದ ಟೀ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟ ದರ್ಶನ್ ಅವರ ಫೋಟೋ ವೈರಲ್ ಆದ ಬೆನ್ನಲ್ಲೇ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಇದೀಗ ಸಾಮಾನ್ಯ ವಿಚಾರಣಾಧೀನ ಕೈದಿಯಂತೆ ನಟ ದರ್ಶನ್‌ ಅವರು ಬಳ್ಳಾರಿ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಈ ಹಿಂದೆ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಅವರನ್ನು ಅವರ ಆಪ್ತರು, ರಾಜಕೀಯ ಮುಖಂಡರು, ನಟ ನಟಿಯರು ಭೇಟಿಯಾಗುತ್ತಿದ್ದರು. ಆದರೆ ಇದೀಗ ಇದಕ್ಕೆಲ್ಲ ಬಳ್ಳಾರಿ ಜೈಲಿನಲ್ಲಿ ಬ್ರೇಕ್ ಹಾಕಲಾಗಿದೆ ಎನ್ನಲಾಗಿದೆ.

ದರ್ಶನ್ ಅವರು ಬಳ್ಳಾರಿ ಜೈಲಿಗೆ ಶಿಫ್ಟ್ ಆಗುತ್ತಿದ್ದ ಹಾಗೇ ಅಲ್ಲಿನ ಖದರ್‌ ಬದಲಾಗುತ್ತಿದೆ. ಇದೀಗ ಹೆಚ್ಚಿನ ಭದ್ರತೆ ಹಾಗೂ ಮುಂಜಾಗೃತ ಕ್ರಮವಾಗಿ ಜೈಲಿನ ಹೊರಭಾಗದಲ್ಲೂ ಸಿಸಿಟಿವಿ ಕ್ಯಾಮರಾಗಳನ್ನು ಇಂದು ಅಳವಡಿಸಲಾಗಿದೆ. ದರ್ಶನ್ ಬರುವ ಮೊದಲೇ ಜೈಲು ಹೈ ಸೆಕ್ಯೂರಿಟಿ ಜೋನ್ ಅನಿಸಿಕೊಂಡಿತ್ತು, ಈಗ ಭದ್ರತೆ ಮತ್ತು ಸುರಕ್ಷತೆಯ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ A1ಆಗ್ತಾರಾ ಎಂದಿದ್ದಕ್ಕೆ ಗೃಹ ಸಚಿವ ಪರಮೇಶ್ವರ್ ಹಿಂಗದಿದ್ಯಾಕೆ