Webdunia - Bharat's app for daily news and videos

Install App

ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದವರ ಕಂಪ್ಲೀಟ್ ಮಾಹಿತಿ ಬಹಿರಂಗ

Krishnaveni K
ಮಂಗಳವಾರ, 6 ಆಗಸ್ಟ್ 2024 (10:59 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನಕ್ಕೊಳಗಾಗಿ ಒಂದೂವರೆ ತಿಂಗಳಾಗಿದೆ. ಇಷ್ಟು ದಿನದಲ್ಲಿ ಅವರನ್ನು ನೋಡಲು ಜೈಲಿಗೆ ಯಾರೆಲ್ಲಾ ಬಂದಿದ್ದಾರೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ.

ನಟ ದರ್ಶನ್ ಜೈಲು ಪಾಲಾದ ಬಳಿಕ ಅವರ ಆಪ್ತ ಸಿನಿಮಾ ಸ್ನೇಹಿತರು, ಕುಟುಂಬಸ್ಥರು ಹಲವರು ಅವರನ್ನು ಭೇಟಿ ಮಾಡಲು ಜೈಲಿಗೆ ಬಂದು ಹೋಗಿದ್ದಾರೆ. ಆ ಪೈಕಿ ಅವರ ಪತ್ನಿ ವಿಜಯಲಕ್ಷ್ಮಿ ನಾಲ್ಕು ಬಾರಿ ಭೇಟಿಯಾಗಿದ್ದಾರೆ. ಉಳಿದಂತೆ ಯಾರೆಲ್ಲಾ ಭೇಟಿಯಾಗಿದ್ದಾರೆ ಎಂದು ಆರ್ ಟಿಐ ಅರ್ಜಿಯಲ್ಲಿ ಮಾಹಿತಿ ಬಹಿರಂಗವಾಗಿದೆ.

ಕಳೆದ ಒಂದೂವರೆ ತಿಂಗಳಲ್ಲಿ ದರ್ಶನ್ ರನ್ನು ಜೈಲಿನಲ್ಲಿ 30 ಮಂದಿ ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ ಅವರ ಪತ್ನಿ ವಿಜಯಲಕ್ಷ್ಮಿ ನಾಲ್ಕು ಬಾರಿ, ಸಹೋದರ ದಿನಕರ್ ತೂಗುದೀಪ ಮೂರು ಬಾರಿ, ನಟ ಧನ್ವೀರ್ ಎರಡು ಬಾರಿ ಭೇಟಿಯಾಗಿದ್ದಾರೆ. ತಾಯಿ ಮೀನಾ ತೂಗುದೀಪ ಒಂದು ಬಾರಿ ಭೇಟಿಯಾಗಿದ್ದಾರೆ.

ಉಳಿದಂತೆ ನಟಿ ರಕ್ಷಿತಾ ಮತ್ತು ಪ್ರೇಮ್ ದಂಪತಿ ಜೂನ್ 29 ರಂದು, ಜುಲೈ 3 ರಂದು ದರ್ಶನ್ ತಾಯಿ, ಜುಲೈ 2 ರಂದು ಸಮತಾ, ಜುಲೈ 10 ರಂದು ಸಂಬಂಧಿ ಸುಶಾಂತ, ಚಂದ್ರಶೇಖರ್, 11 ರಂದು ನಟ ಧನ್ವೀರ್, ಚಂದ್ರಶೇಖರ್, ನಾಗೇಶ್, ಸುನಿಲ್, ಶಿವಕುಮಾರ್ ಭೇಟಿ ಮಾಡಿದ್ದಾರೆ. ಜುಲೈ 19 ರಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಿರ್ದೇಶಕ ತರುಣ್ ಸುಧೀರ್, ಜುಲೈ 26 ರಂದು ನಟ ಸಾಧು ಕೋಕಿಲ ಸೇರಿದಂತೆ 30 ಮಂದಿ ಇದುವರೆಗೆ ದರ್ಶನ್ ರನ್ನು ಭೇಟಿ ಮಾಡಿರುವುದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments