Webdunia - Bharat's app for daily news and videos

Install App

ರತ್ನಮಂಜರಿಯಲ್ಲಿದೆಯಾ ಹಾರರ್ ವೃತ್ತಾಂತ?

Webdunia
ಶನಿವಾರ, 11 ಮೇ 2019 (18:12 IST)
ಶೀರ್ಷಿಕೆಯ ಮೂಲಕವೇ ಸೆಳೆಯೋ ಒಂದಷ್ಟು ಸಿನಿಮಾಗಳು ಸಾಲು ಸಾಲಾಗಿ ಬರುತ್ತಿವೆ. ದಶಕಗಳಷ್ಟು ಹಿಂದೆ ತೆರೆ ಕಂಡು ಸೂಪರ್ ಹಿಟ್ ಆಗಿದ್ದ ಚಿತ್ರ ರತ್ನಮಂಜರಿ. ಇದೀಗ ಅದೇ ಹೆಸರಿನ ರತ್ನಮಂಜರಿ ಚಿತ್ರವೀಗ ಇದೇ ತಿಂಗಳ ಹದಿನೇಳರಂದು ಬಿಡುಗಡೆಗೆ ಸಜ್ಜಾಗಿದೆ.

ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಸಖತ್ ಕ್ರೇಜ್ ಹುಟ್ಟು ಹಾಕಿರೋ ಈ ಚಿತ್ರದ ಸುತ್ತಾ ಪ್ರೇಕ್ಷಕರಲ್ಲಿರೋ ಕ್ಯೂರಿಯಾಸಿಟಿಗಳು ಒಂದೆರಡಲ್ಲ.
ಪ್ರಸಿದ್ಧ ನಿರ್ದೇಶನದ ರತ್ನಮಂಜರಿ ಮರ್ಡರ್ ಮಿಸ್ಟರಿಯ ಸುತ್ತಾ ನಡೆಯೋ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರೋ ಸಿನಿಮಾ ಅನ್ನೋದು ಈಗಾಗಲೇ ಜಾಹೀರಾಗಿದೆ. ಬರೀ ಅಷ್ಟೇ ಅಲ್ಲದೇ ಈ ಸಿನಿಮಾ ಅದರಾಚೆಗೂ ಕೆಲ ನಿಗೂಢಗಳನ್ನು ಹೊಂದಿದೆ ಅನ್ನೋ ಮಾತುಗಳೂ ಕೇಳಿ ಬರುತ್ತಿದೆ. ಆದರೆ ಇದೇ ಹೊತ್ತಲ್ಲಿ ಮತ್ತೊಂದು ಪ್ರಶ್ನೆಯೂ ಪ್ರೇಕ್ಷಕರನ್ನ ಕಾಡುತ್ತಿದೆ. ರತ್ನಮಂಜರಿಯಲ್ಲಿ ಹಾರರ್ ಅಂಶಗಳೂ ಇದ್ದಾವಾ ಎಂಬುದು ಆ ಪ್ರಶ್ನೆಯ ಸಾರಾಂಶ. ಆದರೆ ಈ ಕ್ಷಣದವರೆಗೂ ಚಿತ್ರತಂಡ ಇದನ್ನು ಗೌಪ್ಯವಾಗಿಯೇ ಇಟ್ಟಿದೆ.
ವಿದೇಶದಲ್ಲಿ ತಮ್ಮದೇ ಆದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರೋ ಕನ್ನಡಿಗರೇ ಸೇರಿ ರೂಪಿಸಿರುವ ಚಿತ್ರ. ನಟರಾಜ್ ಹಳೆಬೀಡು, ಸಂದೀಪ್ ಕುಮಾರ್, ಡಾ. ನವೀನ್ ಸೇರಿ ನಿರ್ಮಾಣ ಮಾಡಿರೋ ಈ ಚಿತ್ರವನ್ನು ವಿದೇಶ ವಾಸಿಯಾಗಿರೋ ಪ್ರಸಿದ್ಧ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಇರೋ ಎಲ್ಲ ಪ್ರಶ್ನೆಗಳಿಗೂ ಇದೇ ತಿಂಗಳ ಹದಿನೇಳರಂದು ಉತ್ತರ ಸಿಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ಸತೀಶ್ ನೀನಾಸಂ ಸಿನಿಮಾ ಶೂಟಿಂಗ್ ಪೂರ್ಣ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

ಮುಂದಿನ ಸುದ್ದಿ
Show comments