Select Your Language

Notifications

webdunia
webdunia
webdunia
webdunia

ಅಪಾರ ಅಭಿಮಾನ ಇಂದಿಗೂ ಕಡಿಮೆಯಾಗಿಲ್ಲ!

ಅಪಾರ ಅಭಿಮಾನ ಇಂದಿಗೂ ಕಡಿಮೆಯಾಗಿಲ್ಲ!
ಬೆಂಗಳೂರು , ಗುರುವಾರ, 25 ನವೆಂಬರ್ 2021 (20:02 IST)
ನಟ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿದ್ದರೂ ಅವರ ಮೇಲಿನ ಅಪಾರ ಅಭಿಮಾನ ಇಂದಿಗೂ ಕಡಿಮೆಯಾಗಿಲ್ಲ.
ಈಗಲೂ ಸಹ ಅಪ್ಪು ಸಮಾಧಿ ನೋಡಲು ದೂರದ ಊರುಗಳಿಂದ ಅಭಿಮಾನಿ ದೇವರುಗಳು ಬರುತ್ತಿದ್ದಾರೆ. ಅದರಂತೆ ಇಲ್ಲೊಬ್ಬ ಅಪ್ಪು ಅಭಿಮಾನಿ ಶಬರಿಮಲೆಗೆ ಅಪ್ಪು ಪೋಟೋ ಹಿಡಿದು ತೆರಳಿದ್ದಾನೆ. ತಲೆ ಮೇಲೆ ಇರುಮುಡಿ ಹೊತ್ತು ಕೈಯಲ್ಲಿ ಅಪ್ಪು ಭಾವಚಿತ್ರ ಹಿಡಿದು ಸ್ವಾಮಿಯೇ ಅಯ್ಯಪ್ಪ ಅನ್ನುತ್ತ ಶಬರಿಮಲೆ ದೇಗುಲದ 18 ಮೆಟ್ಟಿಲು ಹತ್ತಿದ್ದಾನೆ. ಇನ್ನು ಅಪ್ಪು ಸಹ ಅವರ ಜೀವಿತಾವಧಿಯಲ್ಲಿ ಪ್ರತಿ ವರ್ಷ ಶಬರಿಮಲೆಗೆ ಹೋಗುತ್ತಿದ್ದರು. ಸದ್ಯ ಅಭಿಮಾನಿ ಅಪ್ಪು ಪೋಟೋ ಹಿಡಿದು ಶಬರಿಮಲೆ ಮೆಟ್ಟಿಲು ಹತ್ತುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ವಿಚಾರಣೆಗೆ ಹಾಜರಾದ ಹಂಸಲೇಖ!