Webdunia - Bharat's app for daily news and videos

Install App

ಕನ್ನಡಪರ ಹೋರಾಟಗಾರನಿಗೆ ಮೂವರು ನಾಯಕಿಯರ ಸಾಥ್!

Webdunia
ಮಂಗಳವಾರ, 24 ಸೆಪ್ಟಂಬರ್ 2019 (13:53 IST)
ಗೋಲ್ಡನ್ ಸ್ಟಾರ್ ಗಣೇಶ್ ಅವರ ಹೋಂ ಬ್ಯಾನರಿನಲ್ಲಿ ನಿರ್ಮಾಣಗೊಂಡಿರುವ ಮೊದಲ ಚಿತ್ರ ಗೀತಾ. ಸೈಯದ್ ಸಲಾಂ ಸಹಕಾರದೊಂದಿಗೆ ಶಿಲ್ಪಾ ಗಣೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಹೋಂ ಬ್ಯಾನರಿನ ಕನಸು ಕಟ್ಟಿಕೊಂಡಿದ್ದ ಗಣೇಶ್, ಅದರಿಂದ ನಿರ್ಮಾಣವಾಗೋ ಚಿತ್ರ ಹೊಸಾ ರೀತಿಯಲ್ಲಿರಬೇಕೆಂಬ ಆಸೆ ಹೊಂದಿದ್ದರು. ನವ ನಿರ್ದೇಶಕ ವಿಜಯ್ ನಾಗೇಂದ್ರ ಕಥೆಯೂ ಅದಕ್ಕೆ ತಕ್ಕುದಾಗಿದ್ದುದರಿಂದ ಗೀತಾ ಸಿನಿಮಾ ಜೀವ ಪಡೆದುಕೊಂಡಿದೆ.

ಈವರೆಗಿನ ಒಂದಷ್ಟು ಚಿತ್ರಗಳಲ್ಲಿ ಗಣೇಶ್ಗೆ ಇಬ್ಬಿಬ್ಬರು ನಾಯಕಿಯರು ಜೊತೆಯಾಗಿದ್ದಿದೆ. ಆದರೆ ಕನ್ನಡ ಪರ ಹೋರಾಟದ ಕಥೆ ಹೊಂದಿರೋ ಗೀತಾದಲ್ಲಿ ಮೂವರು ನಾಯಕಿಯರು ಗಣೇಶ್ಗೆ ಸಾಥ್ ಕೊಟ್ಟಿದ್ದಾರೆ!
 
ಸೈಯದ್ ಸಲಾಮ್ ಅವರ ಸಹಕಾರದೊಂದಿಗೆ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿರೋ ಈ ಚಿತ್ರದಲ್ಲಿ ಪ್ರಯಾಗಾ ಮಾರ್ಟಿನ್, ಶಾನ್ವಿ ಶ್ರೀವಾತ್ಸವ್ ಮತ್ತು ಪಾರ್ವತಿ ಅರುಣ್ ಗೀತಾ ಚಿತ್ರದ ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತ್ರ ಕನ್ನಡಿಗರಲ್ಲಿ ಭಾಷೆಯ ಉಳಿವಿಗಾಗಿ ಹೋರಾಡೋ ಕಿಚ್ಚು ಹೊತ್ತಿಸೋ ವಿಚಾರಗಳನ್ನೊಳಗೊಂಡಿದೆ ಎಂಬ ಸಂಗತಿ ಈಗಾಗಲೇ ಜಾಹೀರಾಗಿದೆ. ಹಾಗಿದ್ದ ಮೇಲೆ ಮೂವರು ನಾಯಕಿಯರು ಯಾಕಿದ್ದಾರೆ ಎಂಬಂತಾ ಪ್ರಶ್ನೆ ಪ್ರೇಕ್ಷಕರಲ್ಲಿದೆ. ಆದರೆ ಇದುವರೆಗೂ ಗೀತಾ ಬಗ್ಗೆ ಒಂದಷ್ಟು ಇಂಟರೆಸ್ಟಿಂಗ್ ಅಂಶಗಳನ್ನು ಬಿಟ್ಟುಕೊಟ್ಟಿರೋ ನಿರ್ದೇಶಕರು ಈ ವಿಚಾರದಲ್ಲಿ ಮಾತ್ರ ಸಣ್ಣ ಸುಳಿವನ್ನೂ ಬಿಟ್ಟು ಕೊಟ್ಟಿಲ್ಲ.
 
ಖಂಡಿತಾ ಈ ಮೂವರು ನಾಯಕಿಯರನ್ನು ಗ್ಲಾಮರ್ ಉದ್ದೇಶದಿಂದ ಕರೆತಂದಿಲ್ಲ. ಈ ವಿಶಿಷ್ಟವಾದ ಕಥೆ ಮೂವರು ನಾಯಕಿಯರ ಬೇಡಿಕೆಯಿಟ್ಟಿದ್ದರಿಂದ  ಪ್ರಯಾಗಾ ಮಾರ್ಟಿನ್, ಶಾನ್ವಿ ಶ್ರೀವಾತ್ಸವ್ ಮತ್ತು ಪಾರ್ವತಿ ಅರುಣ್ ಗಣೇಶ್ಗೆ ಜೋಡಿಗಳಾಗಿ ನಟಿಸಿದ್ದಾರೆ. ಅವರೆಲ್ಲರಿಗೂ ಕೂಡಾ ಗಟ್ಟಿತನ ಹೊಂದಿರೋ ಪಾತ್ರಗಳನ್ನು ವಿಜಯ್ ನಾಗೇಂದ್ರ ಸೃಷ್ಟಿಸಿದ್ದಾರೆ. ಈ ಪಾತ್ರಗಳು ನಾಯಕನೊಂದಿಗೆ ಪ್ರೀತಿಯಲ್ಲಿ ಬೀಳೋದಕ್ಕಷ್ಟೇ ಸೀಮಿತ ಅಂತ ನೀವೇನಾದರೂ ಅಂದುಕೊಂಡಿದ್ದರೆ ಖಂಡಿತಾ ಗೀತಾದಲ್ಲಿ ಅಚ್ಚರಿಯ ಮೇಲೆ ಅಚ್ಚರಿ ಎದುರಾಗಲಿದೆ. ನಿಜಕ್ಕೂ ಈ ಪಾತ್ರಗಳ ಹಿಂದೆ ಅಂತಾದ್ದೇನಿದೆ ಅನ್ನೋದು ಇದೇ ತಿಂಗಳ 27ರಂದು ಬಯಲಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments