Select Your Language

Notifications

webdunia
webdunia
webdunia
webdunia

ಸಾನ್ಯಾ ಅಯ್ಯರ್ ಹೇಗೋ, ಏನೋ ಅಂದುಕೊಂಡಿದ್ದರೆ ಆದ್ರೆ ಕೇಳಿದ್ದೆಲ್ಲಾ ಕೊಟ್ಟರು ಎಂದ ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್

Gauri Movie

Krishnaveni K

ಬೆಂಗಳೂರು , ಮಂಗಳವಾರ, 6 ಆಗಸ್ಟ್ 2024 (12:36 IST)
Photo Credit: Instagram
ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ನಾಯಕರಾಗಿ ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್ ನಾಯಕಿಯಾಗಿರುವ ಗೌರಿ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಈ ವೇಳೆ ಸಮರ್ಜಿತ್ ಆಡಿದ ಮಾತೊಂದು ಅಪಾರ್ಥಕ್ಕೆ ಕಾರಣವಾಯಿತು.

ಗೌರಿ ಟ್ರೈಲರ್ ಲಾಂಚ್ ಗೆ ಕಿಚ್ಚ ಸುದೀಪ್, ಪ್ರಿಯಾಂಕ ಉಪೇಂದ್ರ ಮುಖ್ಯ ಅತಿಥಿಗಳಾಗಿ ಬಂದಿದ್ದರು. ವೇದಿಕೆಯಲ್ಲಿ ಸುದೀಪ್ ಹಾಗೂ ಪ್ರಿಯಾಂಕ ಚಿತ್ರತಂಡಕ್ಕೆ ಶುಭ ಕೋರಿದರು. ಬಳಿಕ ಇಂದ್ರಜಿತ್ ತಮ್ಮ ತಂಡದ ಪರವಾಗಿ ಕಿಚ್ಚ ಸುದೀಪ್ ಗೆ ಡಬ್ಲ್ಯುಜಿ ಗ್ರೇಸ್ ಅವರ ಹಳೆಯ ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿದರು.

ತಮ್ಮ ಸಿನಿಮಾ ಕಾರ್ಯಕ್ರಮ ಎಂದ ಮೇಲೆ ನಾಯಕ ನಟನಾದ ಸಮರ್ಜಿತ್ ಮತನಾಡಲೇಬೇಕಲ್ವಾ? ಹೇಳಿ ಕೇಳಿ ಇದು ಅವರ ಮೊದಲ ಸಿನಿಮಾ. ದಿಗ್ಗಜರ ಜೊತೆ ವೇದಿಕೆ ಹಂಚಿಕೊಂಡು ಮಾತನಾಡಲು ಶುರು ಮಾಡಿದಾಗ ಅವರು ನರ್ವಸ್ ಆಗಿದ್ದರು. ಈ ವೇಳೆ ಅವರು ಮಾತನಾಡುವಾಗ ಎಡವಟ್ಟೊಂದನ್ನು ಮಾಡಿದರು.

ನಾಯಕಿ ಸಾನ್ಯಾ ಬಗ್ಗೆ ಮಾತನಾಡುವಾಗ ಸಮರ್ಜಿತ್ ‘ಸಾನ್ಯಾ ನನಗಿಂತ ಹೆಚ್ಚು ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಟಿವಿ ಶೋಗಳಲ್ಲೆಲ್ಲಾ ಮಾಡಿದ್ದಾರೆ. ಅವರು ಹೇಗಿರ್ತಾರೋ ಎಂಬ ಅನುಮಾನವಿತ್ತು. ಆದ್ರೆ ಅವರು ಕೇಳಿದ್ದನ್ನೆಲ್ಲಾ ಕೊಟ್ಟರು’ ಎಂದು ಹೇಳಿದರು. ಅವರ ಈ ಮಾತು ಅಲ್ಲಿದ್ದವರ ನಗೆಗಡಲಲ್ಲಿ ತೇಲಿಸಿತು. ಸಮರ್ಜಿತ್ ಸಾಮಾನ್ಯವಾಗಿ ಹೇಳಿದರೂ ಕೇಳಿದ್ದನ್ನೆಲ್ಲಾ ಕೊಟ್ಟರು ಎನ್ನುವ ಶಬ್ಧ ಅಪಾರ್ಥವೆನಿಸಿ ಅಲ್ಲಿದ್ದವರು ಬಿದ್ದೂ ಬಿದ್ದು ನಕ್ಕರು. ಈ ವೇಳೆ ಅಲ್ಲೇ ಸುದೀಪ್ ಕೂಡಾ ನಗು ತಡೆಯಲಾಗದೇ ಸಮರ್ಜಿತ್ ರನ್ನು ತಬ್ಬಿಕೊಂಡು ಕಾಲೆಳೆದರು. ಬಳಿಕ ತಮ್ಮ ಮಾತು ಅಪಾರ್ಥವಾಗಿದ್ದಕ್ಕೆ ತಿದ್ದಿಕೊಂಡು ಸಮರ್ಜಿತ್ ಮಾತು ಮುಂದುವರಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಪಂಚೆ ಉಟ್ಟುಕೊಂಡು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ರಾಕಿ ಭಾಯಿ ಯಶ್ ಕೊನೆಗೆ ಕಾಣಿಸಿಕೊಂಡಿದ್ದು ಇಲ್ಲಿ (Video)