Select Your Language

Notifications

webdunia
webdunia
webdunia
webdunia

ಪತಿ ದರ್ಶನ್ ಭೇಟಿ ಮಾಡಲು ಕೊನೆಗೂ ಠಾಣೆಗೆ ಬಂದ ವಿಜಯಲಕ್ಷ್ಮಿ

Darshan

Krishnaveni K

ಬೆಂಗಳೂರು , ಬುಧವಾರ, 19 ಜೂನ್ 2024 (13:42 IST)
Photo Credit: Facebook
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಪತಿ ದರ್ಶನ್ ರನ್ನು ನೋಡಲು ಕೊನೆಗೂ ಪತ್ನಿ ವಿಜಯಲಕ್ಷ್ಮಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಬಂದಿದ್ದಾರೆ.

ದರ್ಶನ್ ಬಂಧನವಾಗಿ ಎಂಟು ದಿನ ಕಳೆದರೂ ಇದುವರೆಗೆ ಅವರ ಕುಟುಂಬದ ಕಡೆಯಿಂದ ಯಾರೂ ಪೊಲೀಸ್ ಠಾಣೆಗೆ ಬಂದಿರಲಿಲ್ಲ ಎಂಬುದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.ಇದಕ್ಕೆ ದರ್ಶನ್ ತಮ್ಮ ತಾಯಿ, ಸಹೋದರನ ಜೊತೆಗಿನ ವೈಮನಸ್ಯ ಕಾರಣ ಎನ್ನಲಾಗಿತ್ತು.

ಆದರೆ ಇದೀಗ ಕೊನೆಗೂ ವಿಜಯಲಕ್ಷ್ಮಿ ಠಾಣೆಗೆ ಬಂದಿದ್ದಾರೆ. ಆದರೆ ಪೊಲೀಸರ ಸೂಚನೆ ಮೇರೆಗೆ ಅವರು ಠಾಣೆಗೆ ಬಂದಿದ್ದಾರೆ. ರೇಣುಕಾಸ್ವಾಮಿ ಹತ್ಯೆ ನಡೆದ ಬಳಿಕ ದರ್ಶನ್ ಸೀದಾ ವಿಜಯಲಕ್ಷ್ಮಿ ಇರುವ ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿರುವ ಅಪಾರ್ಟ್ ಮೆಂಟ್ ಗೆ ತೆರಳಿದ್ದರು. ಅಲ್ಲಿ ಅವರು ಬಟ್ಟೆ ಬದಲಾಯಿಸಿದ್ದಲ್ಲದೆ, ಶೂ ಕೂಡಾ ಅಲ್ಲಿಯೇ ಬಿಟ್ಟಿದ್ದರು. ಇದೆಲ್ಲವನ್ನೂ ಪೊಲೀಸರು ಅಲ್ಲಿಗೆ ತೆರಳಿ ವಶಪಡಿಸಿಕೊಂಡಿದ್ದಾರೆ.

ಹೀಗಾಗಿ ವಿಜಯಲಕ್ಷ್ಮಿಯನ್ನು ಹೆಚ್ಚಿನ ವಿಚಾರಣೆಗೆ ಇಂದು ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಅದರಂತೆ ವಿಜಯಲಕ್ಷ್ಮಿ ಠಾಣೆಗೆ ಬಂದು ದರ್ಶನ್ ಕುರಿತು ಹೇಳಿಕೆ ನೀಡಿದ್ದಾರೆ. ಈ  ವೇಳೆ ದರ್ಶನ್ ಗೆ ಅಗತ್ಯ ವಸ್ತುಗಳನ್ನೂ ಅವರು ತಂದುಕೊಟ್ಟಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಚಕ್ರವರ್ತಿಯಾಗಿದ್ದ ದರ್ಶನ್ ಗೆ ಲಾಕಪ್ ನಲ್ಲಿ ಕೈಯೇ ದಿಂಬು, ನೆಲವೇ ಹಾಸಿಗೆ