Select Your Language

Notifications

webdunia
webdunia
webdunia
webdunia

ಕೆಜಿಎಫ್ 1 ಬಂದ ಮೇಲೆ ಕನ್ನಡ ಮರೆತ್ರಿ, ಕೆಜಿಎಫ್ 2 ಬಂದ್ಮೇಲೆ ಕರ್ನಾಟಕವನ್ನೇ ಮರೀತೀರಾ? ಯಶ್ ಗೆ ತರಾಟೆ

ಕೆಜಿಎಫ್ 1 ಬಂದ ಮೇಲೆ ಕನ್ನಡ ಮರೆತ್ರಿ, ಕೆಜಿಎಫ್ 2 ಬಂದ್ಮೇಲೆ ಕರ್ನಾಟಕವನ್ನೇ ಮರೀತೀರಾ? ಯಶ್ ಗೆ ತರಾಟೆ
ಬೆಂಗಳೂರು , ಶನಿವಾರ, 24 ಆಗಸ್ಟ್ 2019 (09:21 IST)
ಬೆಂಗಳೂರು: ಇತ್ತೀಚೆಗೆ ಸ್ಟಾರ್ ನಟ, ನಟಿಯರು ಕನ್ನಡ ವಿಚಾರಕ್ಕೆ ಆಗಾಗ ವಿವಾದದ ಕೇಂದ್ರಬಿಂದುವಾಗುತ್ತಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್ ದಂಪತಿ ಅದೇ ವಿವಾದದಲ್ಲಿ ಸಿಲುಕಿದ್ದಾರೆ.


ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಮಗುವಿನ ಕೈ ಕಾಲಿನ ಫ್ರೇಮ್ ಕಲಾಕೃತಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಸಂದೇಶ ನೀಡಿದ್ದರು. ಆದರೆ ಈ ವಿಡಿಯೋದಲ್ಲಿ ಇಬ್ಬರೂ ಇಂಗ್ಲಿಷ್ ನಲ್ಲಿ ಮಾತನಾಡಿದ್ದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಕೆಜಿಎಫ್ 1 ಬಂದು ನ್ಯಾಷನಲ್ ಲೆವೆಲ್ ನಲ್ಲಿ ಗುರುತಿಸಿಕೊಂಡ ಮೇಲೆ ಕನ್ನಡ ಮರೆತಿರಿ. ಇನ್ನು ಕೆಜಿಎಫ್ 2 ಬಂದ ಮೇಲೆ ಕನ್ನಡವನ್ನೇ ಮರೀತೀರಾ ಎಂದು ಕೆಲವರು ಕಿಡಿ ಕಾರಿದ್ದಾರೆ. ಮತ್ತೆ ಕೆಲವರು ಬೆಳೆಯುವವರೆಗೂ ಕನ್ನಡ ಬೇಕು, ಬೆಳೆದ ಮೇಲೆ ಕನ್ನಡ ಬೇಡ್ವಾ ಎಂದು ವ್ಯಂಗ್ಯ ಮಾಡಿದ್ದಾರೆ.

ಮತ್ತೆ ಕೆಲವರು ಯಶ್ ರನ್ನು ಸಮರ್ಥಿಸಿಕೊಂಡಿದ್ದು, ಯಶ್ ಗೆ ಈ ದೇಶದಾದ್ಯಂತ ಅಭಿಮಾನಿಗಳಿದ್ದಾರೆ. ಅದಕ್ಕೇ ಇಂಗ್ಲಿಷ್ ನಲ್ಲಿ ಮಾತನಾಡಿದರು. ಇಂಗ್ಲಿಷ್ ನಲ್ಲಿ ಮಾತನಾಡಿದರು ಎಂದರೆ ಕನ್ನಡ ಮರೆತರು ಎಂದು ಅರ್ಥವಲ್ಲ. ಇಷ್ಟಕ್ಕೇ ಯಾಕೆ ಏನೇನೋ ಕಾಮೆಂಟ್ ಮಾಡ್ತಿದ್ದೀರಾ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಅಂತೂ ಕನ್ನಡ ವಿಷಯಕ್ಕೆ ರಾಕಿಂಗ್ ದಂಪತಿ ಈಗ ಟ್ರೋಲ್ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ ರೆಕಾರ್ಡ್ ಬ್ರೇಕ್ ಮಾಡಲಿರುವ ಪ್ರಭಾಸ್