Publish Date: Tue, 20 Dec 2022 (08:40 IST)
Updated Date: Tue, 20 Dec 2022 (08:55 IST)
ಬೆಂಗಳೂರು: ವೇದ ಬಿಡುಗಡೆ ಹೊಸ್ತಿಲಲ್ಲಿರುವ ಶಿವರಾಜ್ ಕುಮಾರ್ ಈಗ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಎ ಹರ್ಷ ನಿರ್ದೇಶನದ ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ವೇದ ಸಿನಿಮಾ ಪ್ರಚಾರದ ವೇಳೆ ಅಭಿಮಾನಿಗಳು ಶಿವಣ್ಣನನ್ನು ಭೇಟಿ ಮಾಡಿದ್ದಾರೆ.
ಈ ವೇಳೆ ಅಭಿಮಾನಿಯೊಬ್ಬರು ಶಿವಣ್ಣನಿಗೆ ಬೀಟಲ್ ಮೇಕೆಯನ್ನು ಗಿಫ್ಟ್ ಮಾಡಿದ್ದಾರೆ. ಶಿವಣ್ಣ ಟಗರು ಹಿಟ್ ಆದ ಮೇಲೆ ಅವರನ್ನು ಟಗರು ಎಂದೇ ಫ್ಯಾನ್ಸ್ ಪ್ರೀತಿಯಿಂದ ಕರೆಯುತ್ತಾರೆ. ಈಗ ಅಭಿಮಾನಿ ಅದೇ ಅಭಿಮಾನದ ಸಂಕೇತವಾಗಿ ಟಗರು ಗಿಫ್ಟ್ ಮಾಡಿ ಕುರುಬರ ಗೌರವದ ಕಂಬಳಿ ಹೊದೆಸಿ ಸನ್ಮಾನಿಸಿದ್ದಾರೆ.