Select Your Language

Notifications

webdunia
webdunia
webdunia
webdunia

ಪುನೀತ್ ಕನಸು ನನಸು ಮಾಡಲು ಹೊರಟ ಕುಟುಂಬಸ್ಥರು

ಪುನೀತ್ ಕನಸು ನನಸು ಮಾಡಲು ಹೊರಟ ಕುಟುಂಬಸ್ಥರು
ಬೆಂಗಳೂರು , ಭಾನುವಾರ, 12 ಡಿಸೆಂಬರ್ 2021 (09:28 IST)
ಬೆಂಗಳೂರು: ಡಾ.ರಾಜ್ ತವರು ಗಾಜನೂರಿನ ಮನೆಯನ್ನು ದುರಸ್ಥಿ ಮಾಡಬೇಕೆಂಬುದು ಪುನೀತ್ ರಾಜ್ ಕುಮಾರ್ ಕನಸಾಗಿತ್ತು. ಅದನ್ನೀಗ ನನಸು ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.

ಗಾಜನೂರಿನ ಮನೆ ಮುರಿದು ಬೀಳುವ ಹಂತಕ್ಕೆ ಬಂದಿದೆ. ಆದರೆ ತಂದೆ ಹುಟ್ಟಿ, ಬೆಳೆದ ಮನೆಯನ್ನು ಹಾಗೆಯೇ ಕಾಪಾಡಿಕೊಳ್ಳಬೇಕು ಎಂಬುದು ಪುನೀತ್ ಕನಸಾಗಿತ್ತು. ಕೆಲವು ತಿಂಗಳ ಹಿಂದಷ್ಟೇ ಇಲ್ಲಿಗೆ ಭೇಟಿ ನೀಡಿದ ಸಂದರ್ಭ ಮನೆ ರಿಪೇರಿ ಮಾಡಿಸುವುದಾಗಿ ಹೇಳಿದ್ದರಂತೆ.

ಆದರೆ ಅದಕ್ಕೂ ಮೊದಲೇ ಅವರು ನಿಧನರಾಗಿದ್ದಾರೆ. ಹೀಗಾಗಿ ಅವರ ಕನಸು ನನಸು ಮಾಡಲು ಇದೀಗ ಡಾ. ರಾಜ್ ಕುಟುಂಬಸ್ಥರೇ ಮನೆಯ ದುರಸ್ಥಿಗೆ ಮುಂದಾಗಿದ್ದಾರೆ. ಮುಂದೆ ಇದನ್ನು ಒಂದು ಮ್ಯೂಸಿಯಂ ರೀತಿ ಕಾಪಾಡಿಕೊಳ್ಳುವ ಯೋಜನೆಯೂ ಕುಟುಂಬದವರಿಗದೆಯಂತೆ. ಮೂಲ ಮನೆಯಿದ್ದ ರೀತಿಯಲ್ಲೇ ದುರಸ್ಥಿ ಮಾಡಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಲಕ್ಕಿ ಮ್ಯಾನ್’ ನಲ್ಲಿ ಪುನೀತ್ ಅಭಿಮಾನಿಗಳಿಗೆ ಮತ್ತಷ್ಟು ಸರ್ಪೈಸ್!