Publish Date: Tue, 19 Apr 2022 (09:15 IST)
Updated Date: Tue, 19 Apr 2022 (09:20 IST)
ಬೆಂಗಳೂರು: ಸಲಗ ಬಳಿಕ ಮತ್ತೆ ನಿರ್ದೇಶನಕ್ಕಿಳಿದಿರುವ ದುನಿಯಾ ವಿಜಯ್ ಭೀಮ ಸಿನಿಮಾ ಲಾಂಚ್ ಮಾಡಿದ್ದಾರೆ.
ನಿನ್ನೆ ಬಂಡೆ ಮಾಕಾಳಮ್ಮ ದೇವಾಲಯದಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ಈ ವೇಳೆ ದುನಿಯಾ ವಿಜಯ್ ಗೆ ಗೆಳೆಯರಾದ ಶ್ರೀನಗರ ಕಿಟ್ಟಿ, ಡಾಲಿ ಧನಂಜಯ, ಕೆ.ಪಿ. ಶ್ರೀಕಾಂತ್ ಸಾಥ್ ಕೊಟ್ಟರು.
ಸಲಗ ಸಿನಿಮಾದಲ್ಲಿ ರೌಡಿಸಂ ಕುರಿತ ಕತೆ ಹೇಳಿದ್ದ ದುನಿಯಾ ವಿಜಯ್ ಭೀಮದಲ್ಲಿ ನೈಜ ಘಟನೆಯಾಧರಿಸಿದ ಕತೆ ಮಾಡಿದ್ದಾರೆ. ಚರಣ್ ರಾಜ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.