Select Your Language

Notifications

webdunia
webdunia
webdunia
webdunia

ಯುವ ಪತ್ನಿ ವಿಚಾರವೆತ್ತಿದ್ದಕ್ಕೆ ರೊಚ್ಚಿಗೆದ್ದ ದೊಡ್ಮನೆ ಫ್ಯಾನ್ಸ್

Yuva Rajkumar

Krishnaveni K

ಬೆಂಗಳೂರು , ಬುಧವಾರ, 30 ಜುಲೈ 2025 (11:00 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈಗ ಸ್ಟಾರ್ ವಾರ್ ಜೋರಾಗಿಯೇ ನಡೆಯುತ್ತಿದೆ. ಡಿಬಾಸ್ ಅಭಿಮಾನಿಗಳು ಮತ್ತು ರಮ್ಯಾ ನಡುವಿನ ಕಿತ್ತಾಟ ಈಗ ಮತ್ತೊಂದು ಹಂತಕ್ಕೆ ಹೋಗಿದ್ದು ಯುವ ರಾಜ್ ಕುಮಾರ್ ಪತ್ನಿ ವಿಚಾರ ಹೊರಗೆ ಬಂದಿದೆ. ಇದಕ್ಕೆ ದೊಡ್ಮನೆ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ.

 

ರಮ್ಯಾಗೆ ಡಿಬಾಸ್ ಅಭಿಮಾನಿಗಳು ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಬಗ್ಗೆ ಡಾ ರಾಜ್ ಕುಟುಂಬದವರು ಪ್ರತಿಕ್ರಿಯಿಸಿದ್ದರು. ಶಿವಣ್ಣ, ವಿನಯ್ ರಾಜ್ ಕುಮಾರ್ ಮಹಿಳೆಯರ ಮೇಲಿನ ಅಪಮಾನ ಸಹಿಸಲ್ಲ. ರಮ್ಯಾ ಜೊತೆಗೆ ನಾವಿದ್ದೇವೆ ಎಂದಿದ್ದರು. ಇದನ್ನು ಯುವ ರಾಜ್ ಕುಮಾರ್ ಕೂಡಾ ಶೇರ್ ಮಾಡಿದ್ದರು.

ಇದರ ಬೆನ್ನಲ್ಲೇ ಡಿಬಾಸ್ ಅಭಿಮಾನಿಗಳ ಸಿಟ್ಟು ಶಿವಣ್ಣ ಮತ್ತು ದೊಡ್ಮನೆ ಮೇಲೆ ತಿರುಗಿದೆ. ಯುವ ಪತ್ನಿ ಶ್ರೀದೇವಿ ಜೊತೆಗಿನ ವಿಚ್ಛೇದನ ವಿಚಾರವನ್ನು ಕೆದಕಿ ಟಾಂಗ್ ಕೊಟ್ಟಿದ್ದಾರೆ. ಇದು ದೊಡ್ಮನೆ ಅಭಿಮಾನಿಗಳು ಕೆರಳುವಂತೆ ಮಾಡಿದೆ.

ಕೌಟುಂಬಿಕವಾಗಿ ನಡೆದ ಭಿನ್ನಾಭಿಪ್ರಾಯಗಳನ್ನು ಅವರೇ ಸರಿಮಾಡಿಕೊಳ್ಳುತ್ತಾರೆ. ಈಗ ನಡೆಯುತ್ತಿರುವ ಬೆಳವಣಿಗೆಯಲ್ಲಿ ಸುಖಾ ಸುಮ್ಮನೆ ಯುವ ರಾಜ್ ಕುಮಾರ್ ವೈಯಕ್ತಿಕ ವಿಚಾರ ಎಳೆದು ತರುವ ಅವಶ್ಯಕತೆ ಇಲ್ಲ. ನಮ್ಮ ಹೀರೋ ದಾಂಪತ್ಯ ಜೀವನದಿಂದ ಹೊರಬಂದು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ತಟಸ್ಥರಾಗಿದ್ದಾರೆ. ನಿಮ್ಮ ಬೆಟ್ಟದಷ್ಟು ಸಮಸ್ಯೆಗಳನ್ನು ಮೊದಲು ಸರಿಪಡಿಸಿ. ನಮ್ಮ ಸಮಸ್ಯೆಯ ಯೋಚನೆ ನಿಮಗೆ ಬೇಕಾಗಿಲ್ಲ. ನಾವು ರಮ್ಯಾ ಪರ ನಿಂತಿದ್ದೇವೆ. ದಾಂಪತ್ಯ ಜೀವನಕ್ಕೂ ಸಾರ್ವಜನಿಕ ಜೀವನದಲ್ಲಿ ಇನ್ನೊಬ್ಬರ ತೇಜೋವಧೆ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದು ಯುವ ಫ್ಯಾನ್ಸ್ ಖಡಕ್ ಆಗಿ ದರ್ಶನ್ ಫ್ಯಾನ್ಸ್ ಗೆ ವಾರ್ನ್ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಮ್ಯಾ, ಪ್ರಥಮ್ ಡಿಬಾಸ್ ಫ್ಯಾನ್ಸ್ ವಾರ್ ಆಗ್ತಿದ್ದರೆ ದರ್ಶನ್ ಎಲ್ಲಿದ್ದಾರೆ ಗೊತ್ತಾ