ಡಾ.ರಾಜ್ ಕುಮಾರ್ ಪುಣ್ಯತಿಥಿ: ಅಣ್ಣಾವ್ರು ಕೊನೆಯದಾಗಿ ಸೇವಿಸಿದ ಆಹಾರ ಇದುವೇ

Krishnaveni K
ಶುಕ್ರವಾರ, 12 ಏಪ್ರಿಲ್ 2024 (09:11 IST)
Photo Courtesy: Twitter
ಬೆಂಗಳೂರು: ಕನ್ನಡಿಗರ ಕಣ್ಮಣಿ, ವರನಟ ಡಾ.ರಾಜ್ ಕುಮಾರ್ ಅವರ ಪುಣ್ಯತಿಥಿ ಇಂದು. 2006 ರ ಏಪ್ರಿಲ್ 12 ರಂದು ಡಾ.ರಾಜ್ ಕುಮಾರ್ ಎಂಬ ಮೇರು ನಟ ನಮ್ಮನ್ನೆಲ್ಲಾ ಅಗಲಿದ್ದರು.

ಎಷ್ಟೇ ದೊಡ್ಡ ನಟನಾದರೂ ಅಣ್ಣಾವ್ರು ಇಂದಿಗೂ ಅಭಿಮಾನಿಗಳ ಮೇಲಿನ ಪ್ರೀತಿ, ಸರಳತೆ, ಮುಗ್ಧತೆಯಿಂದಲೇ ಎಲ್ಲರ ಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಯೋಗ ಮಾಡಿಕೊಂಡು ಆರೋಗ್ಯವಾಗಿದ್ದ ಅವರಿಗೆ ಕೊನೆಗಾಲದಲ್ಲಿ ಮಂಡಿ ನೋವು ತೀರಾ ತೊಂದರೆ ಕೊಟ್ಟಿತ್ತು. ಹೀಗಾಗಿ ಅಭಿನಯ ಅಪರೂಪವಾಗಿತ್ತು.

ಅಣ್ಣಾವ್ರು ತೀರಿಕೊಂಡಾಗ ಅವರಿಗೆ 76 ವರ್ಷವಾಗಿತ್ತು. ಸದಾಶಿವನಗರದ ತಮ್ಮ ಮನೆಯಲ್ಲಿಯೇ ಅವರು ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದರು. ಅವರು ತೀರಿಕೊಂಡ ಸುದ್ದಿ ಕೇಳಿ ಇಡೀ ಕರ್ನಾಟಕವೇ ಶೋಕಸಾಗರದಲ್ಲಿ ಮುಳುಗಿತ್ತು. ಅಭಿಮಾನಿಗಳು ದಾಂಧಲೆ ಎಬ್ಬಿಸಿದ್ದರು.

ಕೊನೆಯ ಗಳಿಗೆಯಲ್ಲಿ ಅಣ್ಣಾವ್ರು ಉಪ್ಪಿಟ್ಟು ತಿಂದಿದ್ದರಂತೆ. ಅಣ್ಣಾವ್ರಿಗೆ ಉಪ್ಪಿಟ್ಟು ಎಂದರೆ ಭಾರೀ ಇಷ್ಟ. ಹೀಗಾಗಿ ಅವರೇ ಕೇಳಿ ಮಾಡಿಸಿಕೊಂಡಿದ್ದರು ಎಂದು ಪಾರ್ವತಮ್ಮ ರಾಜ್ ಕುಮಾರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕರುಪ್ಪು ಸಕ್ಸಸ್‌ ಖುಷಿಯಲ್ಲಿ ಛಾಯಾಗ್ರಾಹಕನಿಗೆ ಬಿಗ್‌ ಸರ್ಪ್ರೈಸ್ ಕೊಟ್ಟ ನಟ ಸೂರ್ಯ

ನಿಮ್ಮ ಸಂಭ್ರಮ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳ ಗಾಯಗಳಿಗೆ ಉಪ್ಪು ಸವರಿದಂತೆ

Video: ಕಾಲಿವುಡ್‌ ನಟ ಅಜಿತ್‌ಗೆ ಮಾತೃವಿಯೋಗ: ತ್ರಿಶಾ ಜೊತೆಯಲ್ಲಿ ಅಂತಿಮ ದರ್ಶನ ಪಡೆದ ಸಿಎಂ ವಿಜಯ್

ಸಾಮಾನ್ಯರಂತೆ ಕೇದಾರನಾಥ ಕ್ಷೇತ್ರಕ್ಕೆ ಚಾರಣ ಮಾಡಿ ಅನುಭವಿ ಹಂಚಿಕೊಂಡ ನಟ ಯುವ ರಾಜಕುಮಾರ್

ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್‌ಗೆ ಮಾತೃವಿಯೋಗ

ಮುಂದಿನ ಸುದ್ದಿ
Show comments