Publish Date: Sun, 12 Apr 2020 (09:18 IST)
Updated Date: Sun, 12 Apr 2020 (09:19 IST)
ಬೆಂಗಳೂರು: ವರನಟ ಡಾ.ರಾಜ್ ಕುಮಾರ್ 14 ನೇ ಪುಣ್ಯಸ್ಮರಣೆ ದಿನವಿಂದು. ಆದರೆ ಈ ಬಾರಿ ಕೊರೋನಾ ಲಾಕ್ ಡೌನ್ ನಿಂದಾಗಿ ಅಭಿಮಾನಿಗಳಿಂದ ಎಂದಿನಂತೆ ಅನ್ನದಾನ, ರಕ್ತದಾನ ಶಿಬಿರ ಆಯೋಜನೆ ಸಾಧ್ಯವಾಗುತ್ತಿಲ್ಲ.
ಲಾಕ್ ಡೌನ್ ನಡುವೆಯೂ ಡಾ. ರಾಜ್ ಹಿರಿಯ ಪುತ್ರ ಶಿವರಾಜ್ ಕುಮಾರ್ ಪತ್ನಿ ಸಮೇತರಾಗಿ ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪಾಜಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಆದರೆ ಪ್ರತೀ ವರ್ಷ ಡಾ. ರಾಜ್ ಅಭಿಮಾನಿಗಳಿಂದ ಬಡವರಿಗೆ ಅನ್ನದಾನ, ರಕ್ತದಾನ ಶಿಬಿರ ಇತ್ಯಾದಿ ಸಾಮಾಜಿಕ ಕೆಲಸಗಳು ನಡೆಯುತ್ತವೆ. ಆದರೆ ಈ ಬಾರಿ ಅದಕ್ಕೆಲ್ಲಾ ಬ್ರೇಕ್ ಬಿದ್ದಿದೆ.