Select Your Language

Notifications

webdunia
webdunia
webdunia
webdunia

ಸಕ್ಸಸ್‌ಮೀಟ್‌ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಲ್ಲಿ ವಿನಂತಿಸಿದ್ದೇನೋ

Ganesh

Sampriya

ಬೆಂಗಳೂರು , ಭಾನುವಾರ, 18 ಆಗಸ್ಟ್ 2024 (13:53 IST)
Photo Courtesy X
ಬೆಂಗಳೂರು: ನಟ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಉತ್ತಮ ಆರಂಭ ಪಡೆದು, ಪ್ರೇಕ್ಷಕರ ಮನಗೆದ್ದು, ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.

ಥಿಯೇಟರ್‌ ಕಡೆ ಫ್ಯಾಮಿಲಿ ಸಮೇತ ಬಂದು ಸಿನಿಮಾ ನೋಡುತ್ತಿರುವುದು ರಾಜ್ಯದಾದ್ಯಂತ ಕಂಡುಬರುತ್ತಿದೆ. ಇನ್ನೂ ಈ ಸಿನಿಮಾ ಗಣೇಶ್ ಅವರಿಗೆ ಕಂ ಬ್ಯಾಕ್ ನೀಡಿದೆ ಎಂದು ಹೇಳಲಾಗುತ್ತಿದೆ. ಸಿನಿಮಾ ನೋಡಿದ ಮಂದಿ ಗಣೇಶ್ ಅಭಿನಯಕ್ಕೆ ಫಿದಾ ಆಗಿದ್ದಾರೆ.

ಇನ್ನೂ ಸಿನಿಮಾ ಬಿಡುಗಡೆಗೂ ಮುನ್ನಾನೇ ಚಿತ್ರದ ಎಲ್ಲ ಹಾಡುಗಳು ಮನಗೆದ್ದು, ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಪ್ರದರ್ಶನವಾಗುತ್ತ ಭರ್ಜರಿ ಕಲೆಕ್ಷನ್‌ನೊಂದಿಗೆ ಮುನ್ನುಗ್ಗುತ್ತಿರುವಾಗ ಚಿತ್ರತಂಡ ಸಕ್ಸಸ್‌ ಮೀಟ್ ಆಯೋಜಿಸಿದೆ.

ಈ ವೇಳೆ ಗಣೇಶ್ ಅವರು ತಮ್ಮ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದಾರೆ. ಈಚೆಗೆ ಸಿನಿಮಾ ನೋಡಿ ವಾಪಾಸ್ಸಾಗುತ್ತಿದ್ದಾಗ 'ಜಿ ಬಾಸ್' ಎಂದು ಕೂಗುವುದನ್ನು ನೋಡಿದ್ದೇನೆ. ದಯವಿಟ್ಟು ನನ್ನನ್ನು ಹಾಗೇ ಕರೆಯಬೇಡಿ ಎಂದು ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವಾರ್ಡ್‌ಗೆ ನಾನು ಅರ್ಹಳಾಗಿದ್ದೆ: ರಾಷ್ಟ್ರ ಪ್ರಶಸ್ತಿ ಗೆದ್ದ ಕನ್ನಡತಿ ನಿತ್ಯಾ ಮೆನನ್ ಪ್ರತಿಕ್ರಿಯಿಸಿದ್ದು ಹೀಗೆ