Select Your Language

Notifications

webdunia
webdunia
webdunia
webdunia

ವರ್ಮಾರವರ ‘ಮರ್ಡರ್ ‘ಚಿತ್ರದ ಪತ್ರಿಕಾಗೋಷ್ಠಿ ರದ್ದಾಗಿದ್ದೇಕೆ ಗೊತ್ತಾ?

ವರ್ಮಾರವರ  ‘ಮರ್ಡರ್ ‘ಚಿತ್ರದ ಪತ್ರಿಕಾಗೋಷ್ಠಿ ರದ್ದಾಗಿದ್ದೇಕೆ ಗೊತ್ತಾ?
ಹೈದರಾಬಾದ್ , ಬುಧವಾರ, 23 ಡಿಸೆಂಬರ್ 2020 (13:23 IST)
ಹೈದರಾಬಾದ್ : ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು  ಹೈದರಾಬಾದ್ ನಲ್ಲಿ ಸಂವೇದನ ಸೃಷ್ಟಿಸಿದ ಪ್ರಣಯ್-ಅಮೃತ ಮರ್ಯಾದ ಹತ್ಯೆ ಪ್ರಕರಣವನ್ನು ‘ಮರ್ಡರ್’ ಚಿತ್ರ ಮಾಡಲು ಹೊರಟಿದ್ದರು. ಈ ಚಿತ್ರ ಪ್ರಾರಂಭದಲ್ಲಿಯೇ  ಭಾರೀ ವಿವಾದಕ್ಕೊಳಗಾಗಿತ್ತು.

ಅಮೃತಾ ಈ ಚಿತ್ರ ಮಾಡಬಾರದೆಂದು ಕೋರ್ಟ್ ಮೆಟ್ಟಿಲೇರಿದ್ದರು.  ಆದರೆ ಕೋರ್ಟ್ ಕೊನೆಗೆ ಚಿತ್ರ ಬಿಡುಗಡೆಗೆ ಅನುಮತಿ ನೀಡಿತ್ತು. ಈ ಹಿನ್ನಲೆಯಲ್ಲಿ ಈ ಚಿತ್ರವನ್ನು ಡಿಸೆಂಬರ್ 24ರಂದು ಬಿಡುಗಡೆ ಮಾಡುವುದಾಗಿ ಆರ್ ಜಿವಿ ಪ್ರಕಟಿಸಿದ್ದಾರೆ.
ಹಾಗಾಗಿ ಈ ಚಿತ್ರದ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಲು ಆರ್ ಜಿವಿ ತೀರ್ಮಾನಿಸಿದ್ದರು. ಆದರೆ ಇದರಿಂದ ಗಲಾಟೆ ನಡೆಯಬಹುದೆಂದು ಪೊಲೀಸರು ಪತ್ರಿಕಾಗೋಷ್ಠಿಗೆ ಅನುಮತಿ ನೀಡಲಿಲ್ಲ. ಹಾಗಾಗಿ ಪತ್ರಿಕಾಗೋಷ್ಠಿ ರದ್ದು ಮಾಡಿರುವುದಾಗಿ ವರ್ಮಾ ಟ್ವೀಟರ್ ನಲ್ಲಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ ಡೇಗೆ ರಾಬರ್ಟ್ ರಿಲೀಸ್?