Select Your Language

Notifications

webdunia
webdunia
webdunia
webdunia

ರಜನೀಕಾಂತ್ ಗೆ ದಾದಾಸಾಹೇಬ್ ಪ್ರಶಸ್ತಿ ನೀಡಿದ್ದಕ್ಕೆ ಕಮಲ್ ಹಾಸನ್ ಹೇಳಿದ್ದೇನು ಗೊತ್ತಾ?

ರಜನೀಕಾಂತ್ ಗೆ ದಾದಾಸಾಹೇಬ್ ಪ್ರಶಸ್ತಿ ನೀಡಿದ್ದಕ್ಕೆ ಕಮಲ್ ಹಾಸನ್ ಹೇಳಿದ್ದೇನು ಗೊತ್ತಾ?
ಚೆನ್ನೈ , ಶನಿವಾರ, 3 ಏಪ್ರಿಲ್ 2021 (12:23 IST)
ಚೆನ್ನೈ : ಕಾಲಿವುಡ್ ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ ಇತ್ತೀಚೆಗೆ ಪ್ರತಿಷ್ಠಿತ ದಾದಾಸಾಹೇಬ್ ಪ್ರಶಸ್ತಿ 2020 ಅನ್ನು ನೀಡಲಾಗಿದೆ. ಈ ಬಗ್ಗೆ ನಟ ಕಮಲ್ ಹಾಸನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ರಜನೀಕಾಂತ್ ಅವರು ದಾದಾಸಾಹೇಬ್ ಪ್ರಶಸ್ತಿ 2020 ಪಡೆದುಕೊಂಡಿದ್ದಕ್ಕೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ. ಇದೀಗ ಈ ಬಗ್ಗೆ ರಜನೀಕಾಂತ್ ಸಮಕಾಲೀನ ನಟ  ಕಮಲ್ ಹಾಸನ್ ಅವರು ಪ್ರತಿಕ್ರಿಯಿಸಿ ತಮ್ಮ ಸ್ನೇಹಿತನಿಗೆ ಟ್ವೀಟರ್ ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

“ಪ್ರತಿಷ್ಠಿತ ದಾದಾಸಾಹೇಬ್ ಪ್ರಶಸ್ತಿಯನ್ನು ಅತಿದೊಡ್ಡ  ಸೂಪರ್ ಸ್ಟಾರ್ ಮತ್ತು ನನ್ನ ಆಪ್ತ ಗೆಳೆಯ ರಜನೀಕಾಂತ್ ಅವರಿಗೆ ನೀಡಲಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ರಜನಿ ಅವರು ಪರದೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರನ್ನು ಗೆಲ್ಲಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಮತ್ತು ಈ ಪ್ರಶಸ್ತಿಗೆ ಅವರು ನೂರು ಪ್ರತಿಶತದಷ್ಟು ಅರ್ಹರಾಗಿದ್ದಾರೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಬಿ ಬಂಪ್ ಪ್ರದರ್ಶಿಸಿದ ನಟಿ ದಿಯಾ ಮಿರ್ಜಾ